‘ರಾಯಚೂರು ನಗರದಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರಿದ್ದೇವೆ. ಬೇರೆ ಬೇರೆ ಸ್ಥಳಗಳಲ್ಲಿ ಆಹಾರಧಾನ್ಯದ ಕಿಟ್ ವಿತರಿಸುವ ವ್ಯವಸ್ಥೆ ಮಾಡಬೇಕಿತ್ತು. ಒಂದೊಂದೆ ಲಾರಿಗಳು ಬರುತ್ತಿವೆ. ಸಿಗುತ್ತದೆಯೋ ಇಲ್ಲವೋ ಎಂದು ಜನರು ನುಗ್ಗುತ್ತಿದ್ದಾರೆ. ಅಧಿಕಾರಿಗಳು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. 4 ಕೆಜಿ ಅಕ್ಕಿ, ಒಂದು ಲೀಟರ್ ಅಡುಗೆ ಎಣ್ಣೆ, ಅರಿಷಣಪುಡಿ, ಕಾರಪುಡಿ ಪಡೆಯುವುದಕ್ಕಾಗಿ ಒಂದು ದಿನದ ಕೆಲಸ ಬಿಟ್ಟು ನಿಂತಿದ್ದೇವೆ. ಆಹಾರಧಾನ್ಯದ ಕಿಟ್ ಮೌಲ್ಯವು ಒಂದು ದಿನದ ದಿನಗೂಲಿಗೂ ಸಮನಾಗಿಲ್ಲ’ ಎಂದು ಕಟ್ಟಡ ಕಾರ್ಮಿಕ ಧರ್ಮರಾಜ್ ಅವರು ‘ಪ್ರಜಾವಾಣಿ’ ಎದುರು ಅಸಮಾಧಾನ ಹೊರಹಾಕಿದರು.