ಲೋಕ ಅದಾಲತ್ ಬಡವರಿಗೆ ಬಹಳ ಅನುಕೂಲಕರ. ರಾಜೀಸಂಧಾನದ ಮೂಲಕ ಉಚಿತವಾಗಿಯೇ ಪ್ರಕರಣಗಳು ಇತ್ಯರ್ಥವಾಗುತ್ತವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಳಂಬವಾಗಿ ಇತ್ಯರ್ಥವಾಗುತ್ತವೆ ಎನ್ನುವ ಸಾಮಾನ್ಯ ಭಾವನೆ ಸಾರ್ವಜನಿಕರಲ್ಲಿದೆ. ಈ ಅಭಿಪ್ರಾಯವನ್ನು ಬದಲಿಸುವುದಕ್ಕಾಗಿ ದೇಶದಾದ್ಯಂತ ನ್ಯಾಯಾಲಯಗಳಲ್ಲಿ ಉಚಿತವಾಗಿಯೇ ಲೋಕ ಅದಾಲತ್ಗಳನ್ನು ಆಯೋಜಿಸಲಾಗುತ್ತಿದೆ ಎಂದರು.