ರಾಯಚೂರು:ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಪ್ರಕರಣ ನಡೆದಿದ್ದು, ಈ ಬಗ್ಗೆ ಸುಳಿವು ಪತ್ತೆ ಹಚ್ಚಲು ಜಿಲ್ಲೆಯ ಪೊಲೀಸರು ಅಸಹಾಯಕತೆ ತೋರಿದ್ದಾರೆ.
ಹಾಡುಹಗಲೇ ಜನದಟ್ಟಣೆ ಪ್ರದೇಶದಲ್ಲಿ ಘಟನೆ ನಡೆಯುವಾಗ ಸಾರ್ವಜನಿಕರು ದುಷ್ಕರ್ಮಿಗಳ ಬೆನ್ನುಬಿದ್ದು ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಕಾರಿನಲ್ಲಿ ಯುವಕನನ್ನು ಎಳೆದೊಯ್ಯುವ ದೃಶ್ಯಗಳು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆಳೆಯಾಗಿವೆ. ದುಷ್ಕರ್ಮಿಗಳು ಅಪಹರಣಕ್ಕಾಗಿ ಬಳಸಿರುವ ಕಾರಿನ ಸಂಖ್ಯೆ ಗೊತ್ತಾಗಿದ್ದರೂ, ಪೊಲೀಸರು ಆರೋಪಿಗಳ ಮಾಹಿತಿ ಕಲೆ ಹಾಕಿಲ್ಲ.
ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಜನರಲ್ಲಿ ಭೀತಿ ಮೂಡುವಂತಾಗಿದೆ. ಇಷ್ಟೆಲ್ಲ ಘಟನೆ ಕಣ್ಣುಮುಂದೆಯೇ ನಡೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಹಿಡಿಯುವುದಕ್ಕೆ ಪೊಲೀಸರಿಗೆ ಏಕೆ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಾರಿನ ನೋಂದಣಿ ಸಂಖ್ಯೆಯ ಮೂಲಕ ಮಾಲೀಕರು ಮತ್ತು ಅವರ ವಿಳಾಸವನ್ನು ಕುಳಿತಲ್ಲಿಯೇ ಸ್ಮಾರ್ಟ್ಫೋನ್ನಲ್ಲಿ ಜನರು ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ರಾಯಚೂರು ಜಿಲ್ಲಾ ಪೊಲೀಸರಿಗೆ ಮಾತ್ರ ಇದರ ಬಗ್ಗೆ ಏಕೆ ಮಾಹಿತಿ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.