<p>ಈಗ 'ತತ್ವಸಿದ್ಧಾಂತದಲ್ಲಿ ಮನಸ್ಸು' ಎಂಬುದನ್ನು ಯಥಾಶಕ್ತಿ ತಿಳಿಯಲು ಪ್ರಯತ್ನಿಸೋಣ.</p>.<p>'ಸ್ವಾತಂತ್ರ್ಯಣ ಸ್ಮರಣಸಾಧನಂ ಮನಃ ' ಸ್ವತಂತ್ರವಾಗಿ ಸ್ಮರಣೆಗೆ ಸಾಧನವಾದದ್ದೇ ಮನಸ್ಸು ಎಂಬುದಾಗಿ ಶ್ರೀಜಯತೀರ್ಥರು ಪ್ರಮಾಣಪದ್ಧತಿಯಲ್ಲಿ ಹೇಳಿದ್ದಾರೆ. ಇಂದ್ರಿಯಗಳು ವಿಷಯಗಳನ್ನು ಅನುಭವಿಸುತ್ತವೆ. ಅನುಭವಕ್ಕೆ ಬಂದ ವಿಷಯಗಳು ಮನಸ್ಸನ್ನು ಪ್ರವೇಶಿಸುತ್ತವೆ. ಅರ್ಥಂದ್ರಿಯ ಸನಿಕರ್ಷದ ಅನಂತರ ಮನಸ್ಸು ಬಾಹೇಂದ್ರಿಯಗಳ ಜೊತೆ ಸಕರ್ಷ ಹೊಂದುತ್ತದೆ. ಆಗ ಆ ಅನುಭವಿಸಿದ ಅರ್ಥಗಳು ಸಂಸ್ಕಾರ ರೂಪವಾಗಿ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ. ಭವಿಷ್ಯತ್ ಕಾಲದಲ್ಲಿ ಆ ಸಂಸ್ಕಾರದ ಸಹಾಯದಿಂದ ಮನಸ್ಸು ಸ್ವತಂತ್ರವಾಗಿ ಸ್ಮರಣೆಯನ್ನು ತಂದುಕೊಡುತ್ತದೆ. ಹೀಗೆ ಸಂಸ್ಕಾರ ಹುಟ್ಟಲು ಹಾಗೂ ಸಂಸ್ಕಾರ ಉಳಿಯಲು, ಮತ್ತು ಸಂಸ್ಕಾರದಿಂದ ಮುಂದೆ ಸ್ಮರಣೆ ಬರಲು ಯಾವುದು ಸಾಧನವೋ , ಅದೇ ಮನಸ್ಸು ಎಂಬುದು ಪ್ರಮಾಣಪದ್ಧತಿಯ ಅಭಿಪ್ರಾಯ.</p>.<p>ಅತ್ಯಂತ ಅಣುಸ್ವರೂಪವಾದ ' ಮನಸ್ಸು' ಜಡಭೂತವಾಗಿದೆ. ಅಹಂಕಾರತತ್ವ ಸ್ವರೂಪವಾದ ಮನಸ್ಸು ಅನಾದಿಕಾಲದಿಂದಲೂ ತೇಜೋಮಯವಾಗಿದ್ದರೂ ಕೂಡ ಜೀವನ ಜೊತೆ ಅಂಟಿಕೊಂಡು ಬಂದಿರುತ್ತದೆ. ಲಿಂಗದೇಹ ಭಂಗವಾಗುವ ತನಕ ಇದರ ಅಸ್ತಿತ್ವ. ಅನಂತರ ಜೀವನಿಗೂ ಮನಸ್ಸಿಗೂ ಯಾವುದೇ ಸಂಬಂಧ ವಿರುವುದಿಲ್ಲ. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯಗಳೆಂಬ ಹತ್ತು ಮಕ್ಕಳನ್ನು ಈ ಮನಸ್ಸು ಹೊಂದಿರುತ್ತದೆ. ಇವೆಲ್ಲದರ ಜವಾಬ್ದಾರಿ ಅನಾದಿಕಾಲದಿಂದ ಪ್ರತಿಶರೀರದಲ್ಲಿಯೂ ಇದ್ದೇ ಇರುತ್ತದೆ. ಯಾರೇ ಒಬ್ಬ ಮನುಷ್ಯನು ಮರಣವನ್ನು ಹೊಂದಿದರೆ ದೇಹ ನಾಶವಾಗುತ್ತದೆ ಹೊರತು, ಮನಸ್ಸಾಗಲೀ, ಕರ್ಮೇಂದ್ರಿಯ ಜ್ಞಾನೇಂದ್ರಿಯಗಳಾಗಲೀ ನಾಶವನ್ನು ಹೊಂದುವುದಿಲ್ಲ. ವಿವಿಧ ಪ್ರಾಣಿಗಳ ಶರೀರದಲ್ಲಿ, ವೃಕ್ಷಾದಿಗಳ ಶರೀರದಲ್ಲಿ, ಮನುಷ್ಯಾದಿ ಶರೀರಗಳಲ್ಲಿ ಈ ಇಂದ್ರಿಯಗಳೆಲ್ಲವೂ ವ್ಯತ್ಯಾಸವಾಗದೇ ಬರುತ್ತಿರುತ್ತವೆ. ಆದ್ದರಿಂದಲೇ ಜನ್ಮಾಂತರದ ಸಂಸ್ಕಾರವನ್ನು ಪ್ರತಿಯೊಬ್ಬರೂ ಹೊಂದಿಯೇ ಇರುತ್ತಾರೆ.</p>.<p>– ಶ್ರೀಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಸ್ವಾಮೀಜಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಗ 'ತತ್ವಸಿದ್ಧಾಂತದಲ್ಲಿ ಮನಸ್ಸು' ಎಂಬುದನ್ನು ಯಥಾಶಕ್ತಿ ತಿಳಿಯಲು ಪ್ರಯತ್ನಿಸೋಣ.</p>.<p>'ಸ್ವಾತಂತ್ರ್ಯಣ ಸ್ಮರಣಸಾಧನಂ ಮನಃ ' ಸ್ವತಂತ್ರವಾಗಿ ಸ್ಮರಣೆಗೆ ಸಾಧನವಾದದ್ದೇ ಮನಸ್ಸು ಎಂಬುದಾಗಿ ಶ್ರೀಜಯತೀರ್ಥರು ಪ್ರಮಾಣಪದ್ಧತಿಯಲ್ಲಿ ಹೇಳಿದ್ದಾರೆ. ಇಂದ್ರಿಯಗಳು ವಿಷಯಗಳನ್ನು ಅನುಭವಿಸುತ್ತವೆ. ಅನುಭವಕ್ಕೆ ಬಂದ ವಿಷಯಗಳು ಮನಸ್ಸನ್ನು ಪ್ರವೇಶಿಸುತ್ತವೆ. ಅರ್ಥಂದ್ರಿಯ ಸನಿಕರ್ಷದ ಅನಂತರ ಮನಸ್ಸು ಬಾಹೇಂದ್ರಿಯಗಳ ಜೊತೆ ಸಕರ್ಷ ಹೊಂದುತ್ತದೆ. ಆಗ ಆ ಅನುಭವಿಸಿದ ಅರ್ಥಗಳು ಸಂಸ್ಕಾರ ರೂಪವಾಗಿ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ. ಭವಿಷ್ಯತ್ ಕಾಲದಲ್ಲಿ ಆ ಸಂಸ್ಕಾರದ ಸಹಾಯದಿಂದ ಮನಸ್ಸು ಸ್ವತಂತ್ರವಾಗಿ ಸ್ಮರಣೆಯನ್ನು ತಂದುಕೊಡುತ್ತದೆ. ಹೀಗೆ ಸಂಸ್ಕಾರ ಹುಟ್ಟಲು ಹಾಗೂ ಸಂಸ್ಕಾರ ಉಳಿಯಲು, ಮತ್ತು ಸಂಸ್ಕಾರದಿಂದ ಮುಂದೆ ಸ್ಮರಣೆ ಬರಲು ಯಾವುದು ಸಾಧನವೋ , ಅದೇ ಮನಸ್ಸು ಎಂಬುದು ಪ್ರಮಾಣಪದ್ಧತಿಯ ಅಭಿಪ್ರಾಯ.</p>.<p>ಅತ್ಯಂತ ಅಣುಸ್ವರೂಪವಾದ ' ಮನಸ್ಸು' ಜಡಭೂತವಾಗಿದೆ. ಅಹಂಕಾರತತ್ವ ಸ್ವರೂಪವಾದ ಮನಸ್ಸು ಅನಾದಿಕಾಲದಿಂದಲೂ ತೇಜೋಮಯವಾಗಿದ್ದರೂ ಕೂಡ ಜೀವನ ಜೊತೆ ಅಂಟಿಕೊಂಡು ಬಂದಿರುತ್ತದೆ. ಲಿಂಗದೇಹ ಭಂಗವಾಗುವ ತನಕ ಇದರ ಅಸ್ತಿತ್ವ. ಅನಂತರ ಜೀವನಿಗೂ ಮನಸ್ಸಿಗೂ ಯಾವುದೇ ಸಂಬಂಧ ವಿರುವುದಿಲ್ಲ. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯಗಳೆಂಬ ಹತ್ತು ಮಕ್ಕಳನ್ನು ಈ ಮನಸ್ಸು ಹೊಂದಿರುತ್ತದೆ. ಇವೆಲ್ಲದರ ಜವಾಬ್ದಾರಿ ಅನಾದಿಕಾಲದಿಂದ ಪ್ರತಿಶರೀರದಲ್ಲಿಯೂ ಇದ್ದೇ ಇರುತ್ತದೆ. ಯಾರೇ ಒಬ್ಬ ಮನುಷ್ಯನು ಮರಣವನ್ನು ಹೊಂದಿದರೆ ದೇಹ ನಾಶವಾಗುತ್ತದೆ ಹೊರತು, ಮನಸ್ಸಾಗಲೀ, ಕರ್ಮೇಂದ್ರಿಯ ಜ್ಞಾನೇಂದ್ರಿಯಗಳಾಗಲೀ ನಾಶವನ್ನು ಹೊಂದುವುದಿಲ್ಲ. ವಿವಿಧ ಪ್ರಾಣಿಗಳ ಶರೀರದಲ್ಲಿ, ವೃಕ್ಷಾದಿಗಳ ಶರೀರದಲ್ಲಿ, ಮನುಷ್ಯಾದಿ ಶರೀರಗಳಲ್ಲಿ ಈ ಇಂದ್ರಿಯಗಳೆಲ್ಲವೂ ವ್ಯತ್ಯಾಸವಾಗದೇ ಬರುತ್ತಿರುತ್ತವೆ. ಆದ್ದರಿಂದಲೇ ಜನ್ಮಾಂತರದ ಸಂಸ್ಕಾರವನ್ನು ಪ್ರತಿಯೊಬ್ಬರೂ ಹೊಂದಿಯೇ ಇರುತ್ತಾರೆ.</p>.<p>– ಶ್ರೀಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಸ್ವಾಮೀಜಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>