<p><strong>ರಾಯಚೂರು: </strong>ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ 351 ನೇ ಆರಾಧನಾ ಮಹೋತ್ಸವದ ಕೊನೆಯ ದಿನ ಭಾನುವಾರ ಮಹಾರಥೋತ್ಸವವು ಅದ್ಧೂರಿಯಾಗಿ ಜರುಗಿತು.</p>.<p>ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮುಖ್ಯವಾಗಿ ಮಂತ್ರಾಲಯ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಗಡಿಗ್ರಾಮಗಳಿಂದ ಜನರು ಕುಟುಂಬಸಮೇತ ರಥೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ಕಾಯಿ, ಕರ್ಪೂರ, ಹೂವು ಸಮರ್ಪಣೆ ಮಾಡಿ ರಾಯರಿಗೆ ನಮಿಸಿದರು. ಪ್ರಹ್ಲಾದ ಮಹಾರಾಜ ಅವತಾರದಲ್ಲಿ ರಾಯರು ರಥಾರೂಢರಾಗಿದ್ದರು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಥದ ಮೂಲಕ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.<br />ಮಂಡ್ಯ, ಮೈಸೂರು ಭಾಗದ ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ಪಟ ಕುಣಿತ ತಂಡಗಳು ಭಾಗವಹಿಸಿದ್ದವು. ವಾಧ್ಯವೈಭವ ವಿಶೇಷವಾಗಿತ್ತು. ಭಕ್ತರು ರಾಯರಿಗೆ ಘೋಷಣೆಗಳನ್ನು ಕೂಗಿದರು.</p>.<p>ಮಠದ ಮುಖ್ಯಬೀದಿಯಿಂದ ಶ್ರೀರಾಘವೇಂದ್ರ ವೃತ್ತದವರೆಗೂ ರಥವು ಸಂಚರಿಸಿ, ಮತ್ತೆ ಮಠದತ್ತ ಸಾಗಿತು.</p>.<p>ಶ್ರೀಗಳು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಮೇಲರ ಪುಷ್ಪವೃಷ್ಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ 351 ನೇ ಆರಾಧನಾ ಮಹೋತ್ಸವದ ಕೊನೆಯ ದಿನ ಭಾನುವಾರ ಮಹಾರಥೋತ್ಸವವು ಅದ್ಧೂರಿಯಾಗಿ ಜರುಗಿತು.</p>.<p>ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮುಖ್ಯವಾಗಿ ಮಂತ್ರಾಲಯ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಗಡಿಗ್ರಾಮಗಳಿಂದ ಜನರು ಕುಟುಂಬಸಮೇತ ರಥೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ಕಾಯಿ, ಕರ್ಪೂರ, ಹೂವು ಸಮರ್ಪಣೆ ಮಾಡಿ ರಾಯರಿಗೆ ನಮಿಸಿದರು. ಪ್ರಹ್ಲಾದ ಮಹಾರಾಜ ಅವತಾರದಲ್ಲಿ ರಾಯರು ರಥಾರೂಢರಾಗಿದ್ದರು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಥದ ಮೂಲಕ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.<br />ಮಂಡ್ಯ, ಮೈಸೂರು ಭಾಗದ ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ಪಟ ಕುಣಿತ ತಂಡಗಳು ಭಾಗವಹಿಸಿದ್ದವು. ವಾಧ್ಯವೈಭವ ವಿಶೇಷವಾಗಿತ್ತು. ಭಕ್ತರು ರಾಯರಿಗೆ ಘೋಷಣೆಗಳನ್ನು ಕೂಗಿದರು.</p>.<p>ಮಠದ ಮುಖ್ಯಬೀದಿಯಿಂದ ಶ್ರೀರಾಘವೇಂದ್ರ ವೃತ್ತದವರೆಗೂ ರಥವು ಸಂಚರಿಸಿ, ಮತ್ತೆ ಮಠದತ್ತ ಸಾಗಿತು.</p>.<p>ಶ್ರೀಗಳು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಮೇಲರ ಪುಷ್ಪವೃಷ್ಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>