‘ಹಾಸನ ಜಿಲ್ಲೆಯ ಒಬ್ಬ ಮಹಿಳೆ, ಇಬ್ಬರು ಯುವಕರು ಹಾಗೂ ಕುರುಕುಂದಾ ಗ್ರಾಮದ ವ್ಯಕ್ತಿಯು ತುರ್ವಿಹಾಳ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಓಣಿಗಳಲ್ಲಿ ಯಾವ ಜಾತಿ ಜನ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಜನರನ್ನು ಕೇಳುತ್ತಾ ಕೆಲವರಿಗೆ ಹಣ ಕೊಡುತ್ತ ಹೊರಟಿದ್ದರು’ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಹಣ ಹಂಚಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು.