<p><strong>ಮಸ್ಕಿ (ರಾಯಚೂರು): </strong>ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ (ಸತ್ಯವತಿ) ಅಡವಿಬಾವಿ ತಾಂಡಾದಲ್ಲಿ ‘ಕಣ್ಣ ಹೊಡಿಯಾಕ್..’ ಹಾಡು ಹಾಡಿ ರಂಜಿಸಿದರು.</p>.<p>‘ಕನ್ನಡ ಸ್ವಲ್ಪ ಮಾತನಾಡಲು ಬರತ್ತೆ’ ಎಂದರು.</p>.<p>‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳಿದ್ದಕ್ಕೆ ಯುವಕರು ಶಿಳ್ಳೆ ಹೊಡೆದರು. ಕಲಬುರ್ಗಿ ಸಂಸದ ಉಮೇಶ ಜಾಧವ ವೇದಿಕೆಯಲ್ಲಿದ್ದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-politics-congress-bjp-tweet-war-on-bs-yediyurappa-siddaramaiah-dk-shivakumar-822074.html" target="_blank">ಡಿಕೆಶಿ ಸಾಗುತ್ತಿರುವ ಹಡಗಿಗೆ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ: ಬಿಜೆಪಿ</a></strong></p>.<p><strong>‘ಮಂಗ್ಲಿ’ ವಿಡಿಯೋ ಸೆರೆಹಿಡಿಯಲು ಪೈಪೋಟಿ<br />ಮಸ್ಕಿ (ರಾಯಚೂರು):</strong> ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಚಲನಚಿತ್ರ ಹಿನ್ನೆಲೆ ಗಾಯಕಿ ಅಡವಿಭಾವಿ ತಾಂಡಾದಲ್ಲಿ ಮತಯಾಚಿಸಿದರು.</p>.<p>ಕಿಕ್ಕಿರುದು ನೆರೆದಿದ್ದ ಯುವಜನರು ಹಾಡು ಹಾಡಲು ಒತ್ತಾಯಿಸಿದರು. 'ಕಣ್ಣೆ ಅದಿರಿಂದಿ..' ಎಂದು ತೆಲುಗು ಭಾಷೆಯಲ್ಲಿ ಮಂಗ್ಲಿ ಹಾಡಿದರು. ಆನಂತರ ಕನ್ನಡದಲ್ಲಿ 'ಕಣ್ಣು ಹೊಡೆಯಾಕ್...' ಹಾಡು ಹಾಡಿದರು.</p>.<p>ನೆರೆದಿದ್ದ ಜನರೆಲ್ಲರ ಕೈಯಲ್ಲಿ ಮೊಬೈಲ್ ತೆರೆದುಕೊಂಡಿತ್ತು. ಎಲ್ಲರೂ ವಿಡಿಯೋ ಗ್ರಾಫರ್ಗಳಾಗಿದ್ದರು.</p>.<p>ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದು ಮತ್ತೆ ಮತ್ತೆ ನೋಡಿಕೊಳ್ಳಲು ಕಾತರರಾಗಿದ್ದರು. ಹಾಡಿಗೆ ಹೆಜ್ಜೆ ಹಾಕಿ ಮೋಜು ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ (ರಾಯಚೂರು): </strong>ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ (ಸತ್ಯವತಿ) ಅಡವಿಬಾವಿ ತಾಂಡಾದಲ್ಲಿ ‘ಕಣ್ಣ ಹೊಡಿಯಾಕ್..’ ಹಾಡು ಹಾಡಿ ರಂಜಿಸಿದರು.</p>.<p>‘ಕನ್ನಡ ಸ್ವಲ್ಪ ಮಾತನಾಡಲು ಬರತ್ತೆ’ ಎಂದರು.</p>.<p>‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳಿದ್ದಕ್ಕೆ ಯುವಕರು ಶಿಳ್ಳೆ ಹೊಡೆದರು. ಕಲಬುರ್ಗಿ ಸಂಸದ ಉಮೇಶ ಜಾಧವ ವೇದಿಕೆಯಲ್ಲಿದ್ದರು.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-politics-congress-bjp-tweet-war-on-bs-yediyurappa-siddaramaiah-dk-shivakumar-822074.html" target="_blank">ಡಿಕೆಶಿ ಸಾಗುತ್ತಿರುವ ಹಡಗಿಗೆ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ: ಬಿಜೆಪಿ</a></strong></p>.<p><strong>‘ಮಂಗ್ಲಿ’ ವಿಡಿಯೋ ಸೆರೆಹಿಡಿಯಲು ಪೈಪೋಟಿ<br />ಮಸ್ಕಿ (ರಾಯಚೂರು):</strong> ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಚಲನಚಿತ್ರ ಹಿನ್ನೆಲೆ ಗಾಯಕಿ ಅಡವಿಭಾವಿ ತಾಂಡಾದಲ್ಲಿ ಮತಯಾಚಿಸಿದರು.</p>.<p>ಕಿಕ್ಕಿರುದು ನೆರೆದಿದ್ದ ಯುವಜನರು ಹಾಡು ಹಾಡಲು ಒತ್ತಾಯಿಸಿದರು. 'ಕಣ್ಣೆ ಅದಿರಿಂದಿ..' ಎಂದು ತೆಲುಗು ಭಾಷೆಯಲ್ಲಿ ಮಂಗ್ಲಿ ಹಾಡಿದರು. ಆನಂತರ ಕನ್ನಡದಲ್ಲಿ 'ಕಣ್ಣು ಹೊಡೆಯಾಕ್...' ಹಾಡು ಹಾಡಿದರು.</p>.<p>ನೆರೆದಿದ್ದ ಜನರೆಲ್ಲರ ಕೈಯಲ್ಲಿ ಮೊಬೈಲ್ ತೆರೆದುಕೊಂಡಿತ್ತು. ಎಲ್ಲರೂ ವಿಡಿಯೋ ಗ್ರಾಫರ್ಗಳಾಗಿದ್ದರು.</p>.<p>ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದು ಮತ್ತೆ ಮತ್ತೆ ನೋಡಿಕೊಳ್ಳಲು ಕಾತರರಾಗಿದ್ದರು. ಹಾಡಿಗೆ ಹೆಜ್ಜೆ ಹಾಕಿ ಮೋಜು ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>