<p><strong>ತುರ್ವಿಹಾಳ:</strong> ‘ಪ್ರತಾಪಗೌಡ ಪಾಟೀಲ ಅವರು ತನ್ನ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅಲ್ಲ‘ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.</p>.<p>ತುರ್ವಿಹಾಳ ಪಟ್ಟಣ ಸೇರಿದಂತೆ ಗುಂಜಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಪರ ಚುನಾವಣೆ ಪ್ರಚಾರ ಮಾಡಿ ಮಾತನಾಡಿದರು.</p>.<p>ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾದ ಪ್ರತಾಪಗೌಡ ಪಾಟೀಲರು, ಜನರ ಆಶಯಕ್ಕೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿರುವ ಕಾರಣಕ್ಕಾಗಿ, ಇಂದು ಉಪ ಚುನಾವಣೆ ಎದುರಾಗಿದೆ. ಇದರಿಂದ ಸರ್ಕಾರದ ಹಣ ವ್ಯಯವಾಗಿ ಸಾರ್ವಜನಿಕರ ಜೀವನದ ಮೇಲೆ ಬರೆ ಬೀಳುತ್ತದೆ. ಇಂಥವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ನೀಡಬೇಕು ಎಂದು ಹೇಳಿದರು.</p>.<p>ಕಾಂಗ್ರೇಸ್ ಮುಖಂಡರಾದ ಪಾರೂಖ್ ಸಾಬ್, ಮಲ್ಲನಗೌಡ ದೇವರಮನಿ, ಸಿರಾಜ್ ಪಾಷಾ ದಳಪತಿ, ಎಚ್.ಎನ್. ಬಡಿಗೇರ್, ಅಬೂತುರಾಬ್, ಮುತ್ತಣ್ಣ ನವಲಿ, ಶಿವಪುತ್ರಪ್ಪ ಕೆಂಗೇರಿ, ಬಾಪೂಗೌಡ ದೇವರಮನಿ, ಕರಿಯಪ್ಪ ಟೇಲರ್, ಗೂಳಪ್ಪ ಕುಂಟೋಜಿ, ಶ್ಯಾಮೀದ್ ಸಾಬ್, ಶ್ಯಾಮೀದ್ ಸಾಬ್ ಅರಬ್, ಶಂಕ್ರಗೌಡ ದೇವರಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರ್ವಿಹಾಳ:</strong> ‘ಪ್ರತಾಪಗೌಡ ಪಾಟೀಲ ಅವರು ತನ್ನ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅಲ್ಲ‘ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.</p>.<p>ತುರ್ವಿಹಾಳ ಪಟ್ಟಣ ಸೇರಿದಂತೆ ಗುಂಜಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಪರ ಚುನಾವಣೆ ಪ್ರಚಾರ ಮಾಡಿ ಮಾತನಾಡಿದರು.</p>.<p>ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾದ ಪ್ರತಾಪಗೌಡ ಪಾಟೀಲರು, ಜನರ ಆಶಯಕ್ಕೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿರುವ ಕಾರಣಕ್ಕಾಗಿ, ಇಂದು ಉಪ ಚುನಾವಣೆ ಎದುರಾಗಿದೆ. ಇದರಿಂದ ಸರ್ಕಾರದ ಹಣ ವ್ಯಯವಾಗಿ ಸಾರ್ವಜನಿಕರ ಜೀವನದ ಮೇಲೆ ಬರೆ ಬೀಳುತ್ತದೆ. ಇಂಥವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ನೀಡಬೇಕು ಎಂದು ಹೇಳಿದರು.</p>.<p>ಕಾಂಗ್ರೇಸ್ ಮುಖಂಡರಾದ ಪಾರೂಖ್ ಸಾಬ್, ಮಲ್ಲನಗೌಡ ದೇವರಮನಿ, ಸಿರಾಜ್ ಪಾಷಾ ದಳಪತಿ, ಎಚ್.ಎನ್. ಬಡಿಗೇರ್, ಅಬೂತುರಾಬ್, ಮುತ್ತಣ್ಣ ನವಲಿ, ಶಿವಪುತ್ರಪ್ಪ ಕೆಂಗೇರಿ, ಬಾಪೂಗೌಡ ದೇವರಮನಿ, ಕರಿಯಪ್ಪ ಟೇಲರ್, ಗೂಳಪ್ಪ ಕುಂಟೋಜಿ, ಶ್ಯಾಮೀದ್ ಸಾಬ್, ಶ್ಯಾಮೀದ್ ಸಾಬ್ ಅರಬ್, ಶಂಕ್ರಗೌಡ ದೇವರಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>