ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಆರತಿ ಬೆಳಗಲು ಬಂದಿದ್ದ ಮಹಿಳೆಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆಯಿತು.
ಸರದಿಯಲ್ಲಿ ಆರತಿ ಹಿಡಿದು ನಿಂತಿದ್ದಾಗ ಮಹಿಳೆಯೊಬ್ಬರ ತಲೆಗೂದಲಿಗೆ ಆರತಿದೀಪ ತಗುಲಿದ್ದು, ಆವಾಂತರಕ್ಕೆ ಕಾರಣವಾಯಿತು. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಕೂಡಲೇ ಗಮನಿಸಿ ಹೊಗೆ ಆಡುತ್ತಿದ್ದ ಕೂದಲಿನ ಬೆಂಕಿ ನಂದಿಸಿದರು. ಬೆಂಕಿ ತಗುಲಿದ್ದು ಮಹಿಳೆಗೆ ಇದು ಗೊತ್ತಾಗಿರಲಿಲ್ಲ.
ಆರತಿ ಬೆಳಗಿದವರಿಗೆರೇಣುಕಾಚಾರ್ಯ ಅವರು ತಲಾ ₹ 100 ಕೊಟ್ಟರು.