<p><strong>ಕವಿತಾಳ:</strong> ‘ದೂರದ ಊರುಗಳಿಂದ ಬರುವವರು ಒಂದು ದಿನ ಮುಂಚಿತವಾಗಿ ಬಂದು ಮಠದಲ್ಲಿ ಉಳಿದುಕೊಂಡರೆ ಮುಹೂರ್ತದ ಸಮಯಕ್ಕೆ ಸರಿಯಾಗಿ ಮಾಂಗಲ್ಯ ಧಾರಣೆಗೆ ಅನುಕೂಲವಾಗಲಿದೆ’ ಎಂದು ಉಟಕನೂರು ಅಡವಿ ಸಿದ್ದೇಶ್ವರ ಮಠದ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.</p>.<p>ಮೇ 1ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡ 71 ಜೋಡಿ ವಧು–ವರರ ಪಾಲಕರಿಗೆ ವಸ್ತ್ರಗಳನ್ನು ಶನಿವಾರ ವಿತರಿಸಿ ಮಾತನಾಡಿದರು.</p>.<p>‘ಮಾಂಗಲ್ಯ, ಬಾಸಿಂಗ, ದಂಡೆ, ಕಾಲುಂಗುರ ಮತ್ತಿತರ ವಸ್ತುಗಳನ್ನು ಮಾಂಗಲ್ಯದ ಸಮಯದಲ್ಲಿ ವಿತರಿಸಲಾಗುವುದು. ವಧು–ವರರ ವಸ್ತ್ರ ಸ್ವೀಕರಿಸಿದ ಕುಟುಂಬದ ಸದಸ್ಯರು ಸಂಬಂಧಿಸಿದ ವಧು ವರರಿಗೆ ಶೀಘ್ರ ತಲುಪಿಸಬೇಕು’ ಎಂದು ತಿಳಿಸಿದರು.</p>.<p>ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ಫಕೀರಪ್ಪ ರಾಮತ್ನಾಳ, ಚಂದ್ರಶೇಖರ ಬಾದರ್ಲಿ, ಆದನಗೌಡ, ಯಂಕನಗೌಡ, ವೆಂಕಟೇಶ ರಾಗಲಪರ್ವಿ, ಈರಣ್ಣ, ಶೇಖರಪ್ಪ ಹುಲ್ಲೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ‘ದೂರದ ಊರುಗಳಿಂದ ಬರುವವರು ಒಂದು ದಿನ ಮುಂಚಿತವಾಗಿ ಬಂದು ಮಠದಲ್ಲಿ ಉಳಿದುಕೊಂಡರೆ ಮುಹೂರ್ತದ ಸಮಯಕ್ಕೆ ಸರಿಯಾಗಿ ಮಾಂಗಲ್ಯ ಧಾರಣೆಗೆ ಅನುಕೂಲವಾಗಲಿದೆ’ ಎಂದು ಉಟಕನೂರು ಅಡವಿ ಸಿದ್ದೇಶ್ವರ ಮಠದ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.</p>.<p>ಮೇ 1ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡ 71 ಜೋಡಿ ವಧು–ವರರ ಪಾಲಕರಿಗೆ ವಸ್ತ್ರಗಳನ್ನು ಶನಿವಾರ ವಿತರಿಸಿ ಮಾತನಾಡಿದರು.</p>.<p>‘ಮಾಂಗಲ್ಯ, ಬಾಸಿಂಗ, ದಂಡೆ, ಕಾಲುಂಗುರ ಮತ್ತಿತರ ವಸ್ತುಗಳನ್ನು ಮಾಂಗಲ್ಯದ ಸಮಯದಲ್ಲಿ ವಿತರಿಸಲಾಗುವುದು. ವಧು–ವರರ ವಸ್ತ್ರ ಸ್ವೀಕರಿಸಿದ ಕುಟುಂಬದ ಸದಸ್ಯರು ಸಂಬಂಧಿಸಿದ ವಧು ವರರಿಗೆ ಶೀಘ್ರ ತಲುಪಿಸಬೇಕು’ ಎಂದು ತಿಳಿಸಿದರು.</p>.<p>ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ಫಕೀರಪ್ಪ ರಾಮತ್ನಾಳ, ಚಂದ್ರಶೇಖರ ಬಾದರ್ಲಿ, ಆದನಗೌಡ, ಯಂಕನಗೌಡ, ವೆಂಕಟೇಶ ರಾಗಲಪರ್ವಿ, ಈರಣ್ಣ, ಶೇಖರಪ್ಪ ಹುಲ್ಲೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>