<p><strong>ಸಿಂಧನೂರು:</strong> ಸನ್ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಹಿರಿಯ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.</p>.<p>ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ತಾಲ್ಲೂಕು ಆರೋಗ್ಯಧಿಕಾರಿ ಡಾ.ಅಯ್ಯನಗೌಡ, ಎಲುಬು ಮತ್ತು ಕೀಲು ತಜ್ಞ ಡಾ.ಸಲಾವುದ್ದೀನ್, ಡಾ.ಮಂಜುನಾಥ, ಡಾ.ವಿದ್ಯಾರಾಣಿ, ಡಾ.ಫರಹಸ್ ಹಾಗೂ ಸರ್ಕಾರಿ ಯುನಾನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಮ್ಜದ್ ಶರೀಫ್ ಅವರನ್ನು ಗೌರವಿಸಲಾಯಿತು.</p>.<p>ಈ ವೇಳೆ ಸನ್ರೈಸ್ ಕಾಲೇಜಿನ ಅಧ್ಯಕ್ಷ ಇರ್ಫಾನ್ ಕೆ. ಮಾತನಾಡಿ,‘ನಮ್ಮನ್ನು ಸೃಷ್ಟಿಸಿದ್ದು ಭಗವಂತನಾದರೆ, ನಮಗೆ ಅನಾಹುತವಾದಾಗ ಮರುಜನ್ಮ ನೀಡುವುದು ವೈದ್ಯರು ಮಾತ್ರ. ಆದ್ದರಿಂದ ವೈದ್ಯರನ್ನು ಕಣ್ಣಿಗೆ ಕಾಣುವ ದೇವರೆಂದೇ ಭಾವಿಸಿ ಗೌರವಯುತವಾಗಿ ಕಾಣಬೇಕು’ ಎಂದರು.</p>.<p>ಕಾರ್ಯದರ್ಶಿ ಇರ್ಷಾದ್ ಕೆ., ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಹನುಮೇಶ, ಉಪನ್ಯಾಸಕರಾದ ಅಶುಪಾಷಾ, ಪ್ರಶಾಂತ ಸೇರಿದಂತೆ ಆಸ್ಪತ್ರೆಯ ಆರೋಗ್ಯ ಸಹಾಯಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು:</strong> ಸನ್ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಹಿರಿಯ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.</p>.<p>ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ತಾಲ್ಲೂಕು ಆರೋಗ್ಯಧಿಕಾರಿ ಡಾ.ಅಯ್ಯನಗೌಡ, ಎಲುಬು ಮತ್ತು ಕೀಲು ತಜ್ಞ ಡಾ.ಸಲಾವುದ್ದೀನ್, ಡಾ.ಮಂಜುನಾಥ, ಡಾ.ವಿದ್ಯಾರಾಣಿ, ಡಾ.ಫರಹಸ್ ಹಾಗೂ ಸರ್ಕಾರಿ ಯುನಾನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಮ್ಜದ್ ಶರೀಫ್ ಅವರನ್ನು ಗೌರವಿಸಲಾಯಿತು.</p>.<p>ಈ ವೇಳೆ ಸನ್ರೈಸ್ ಕಾಲೇಜಿನ ಅಧ್ಯಕ್ಷ ಇರ್ಫಾನ್ ಕೆ. ಮಾತನಾಡಿ,‘ನಮ್ಮನ್ನು ಸೃಷ್ಟಿಸಿದ್ದು ಭಗವಂತನಾದರೆ, ನಮಗೆ ಅನಾಹುತವಾದಾಗ ಮರುಜನ್ಮ ನೀಡುವುದು ವೈದ್ಯರು ಮಾತ್ರ. ಆದ್ದರಿಂದ ವೈದ್ಯರನ್ನು ಕಣ್ಣಿಗೆ ಕಾಣುವ ದೇವರೆಂದೇ ಭಾವಿಸಿ ಗೌರವಯುತವಾಗಿ ಕಾಣಬೇಕು’ ಎಂದರು.</p>.<p>ಕಾರ್ಯದರ್ಶಿ ಇರ್ಷಾದ್ ಕೆ., ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಹನುಮೇಶ, ಉಪನ್ಯಾಸಕರಾದ ಅಶುಪಾಷಾ, ಪ್ರಶಾಂತ ಸೇರಿದಂತೆ ಆಸ್ಪತ್ರೆಯ ಆರೋಗ್ಯ ಸಹಾಯಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>