ಮಾರುಕಟ್ಟೆ ಆವರಣದಲ್ಲಿ ವರ್ತಕರಿಗಾಗಿ ಮಳಿಗೆಗಳನ್ನು ಕಟ್ಟಿಸಿ ಆರೇಳು ವರ್ಷಗಳು ಕಳೆದಿವೆ. ಕೆಲವು ವರ್ತಕರು ಮಾತ್ರ ದಲಾಲಿ ಅಂಗಡಿಗಳನ್ನು ಆರಂಭಿಸಿದ್ದು ಬಿಟ್ಟರೆ ಬಹುತೇಕ ವರ್ತಕರು ಇನ್ನೂ ವಹಿವಾಟು ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಮಾರುಕಟ್ಟೆ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಸೌಕರ್ಯಗಳು ಇಲ್ಲದಿರುವುದು.