<p><strong>ರಾಯಚೂರು:</strong> ಜಿಲ್ಲೆಯಲ್ಲಿ ಬೆಂಕಿಯಂತಹ ಬಿಸಿಲು ಮುಂದುವರೆದಿದ್ದು, ನಗರದ ಗೋಶಾಲಾ ರಸ್ತೆಯಲ್ಲಿ ಭಾನುವಾರ ವೃದ್ದರೊಬ್ಬರು ಬಿಸಿಲಿನಿಂದ ಬಳಲಿ ಮೃತಪಟ್ಟಿದ್ದಾರೆ.</p>.<p>ಮೃತ ವೃದ್ಧನನ್ನು ನಗರದ ಯಕ್ಲಾಸಪುರ ಬಡಾವಣೆಯ ರಾಮಣ್ಣ ಕಬ್ಬೇರ್ (70) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಹೊರಟಿದ್ದಾಗ ಒಮ್ಮೆಲೇ ತಲೆ ಸುತ್ತು ಬಂದು ನಿಶ್ಯಕ್ತಿಗೆ ಒಳಗಾಗಿ ರಸ್ತೆ ಬದಿಯಲ್ಲೇ ನೆಲದಲ್ಲಿ ಮಲಗಿದರು. ನಂತರ ಮೇಲೇಳಲಿಲ್ಲ.</p>.<p>ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈ ವ್ಯಕ್ತಿ ಸಾರ್ವಜನಿಕರು ಕೊಡುವ ಆಹಾರ ಸೇವಿಸುತ್ತಿದ್ದ. ಬಿಸಿಲಿನ ಝಳದಿಂದ ಬಳಲಿದ್ದ. ಕುಸಿದು ಬಿದ್ದವ ಮತ್ತೆ ಮೇಲೆ ಏಳಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ಪೊಲೀಸರು ಸ್ಥಳಕ್ಕೆ ಬಂದು ಪಂಚನಾಮೆ ಮಾಡಿದರು. ನಂತರ ಕುಟುಂಬದ ಸದಸ್ಯರು ವೃದ್ಧನ ಶವವನ್ನು ಕೊಂಡೊಯ್ದರು.</p>.<p>ಮಾರ್ಚ್ 3ರಂದು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಮಸ್ಕಿ ತಾಲ್ಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ (62) ಎಂಬುವವರು ಮೃತಪಟ್ಟಿದ್ದರು. ಬಿಸಿಲಿನ ತಾಪದ ಬಳಲಿಕೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಜಿಲ್ಲೆಯಲ್ಲಿ ಬೆಂಕಿಯಂತಹ ಬಿಸಿಲು ಮುಂದುವರೆದಿದ್ದು, ನಗರದ ಗೋಶಾಲಾ ರಸ್ತೆಯಲ್ಲಿ ಭಾನುವಾರ ವೃದ್ದರೊಬ್ಬರು ಬಿಸಿಲಿನಿಂದ ಬಳಲಿ ಮೃತಪಟ್ಟಿದ್ದಾರೆ.</p>.<p>ಮೃತ ವೃದ್ಧನನ್ನು ನಗರದ ಯಕ್ಲಾಸಪುರ ಬಡಾವಣೆಯ ರಾಮಣ್ಣ ಕಬ್ಬೇರ್ (70) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಹೊರಟಿದ್ದಾಗ ಒಮ್ಮೆಲೇ ತಲೆ ಸುತ್ತು ಬಂದು ನಿಶ್ಯಕ್ತಿಗೆ ಒಳಗಾಗಿ ರಸ್ತೆ ಬದಿಯಲ್ಲೇ ನೆಲದಲ್ಲಿ ಮಲಗಿದರು. ನಂತರ ಮೇಲೇಳಲಿಲ್ಲ.</p>.<p>ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈ ವ್ಯಕ್ತಿ ಸಾರ್ವಜನಿಕರು ಕೊಡುವ ಆಹಾರ ಸೇವಿಸುತ್ತಿದ್ದ. ಬಿಸಿಲಿನ ಝಳದಿಂದ ಬಳಲಿದ್ದ. ಕುಸಿದು ಬಿದ್ದವ ಮತ್ತೆ ಮೇಲೆ ಏಳಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ಪೊಲೀಸರು ಸ್ಥಳಕ್ಕೆ ಬಂದು ಪಂಚನಾಮೆ ಮಾಡಿದರು. ನಂತರ ಕುಟುಂಬದ ಸದಸ್ಯರು ವೃದ್ಧನ ಶವವನ್ನು ಕೊಂಡೊಯ್ದರು.</p>.<p>ಮಾರ್ಚ್ 3ರಂದು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಮಸ್ಕಿ ತಾಲ್ಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ (62) ಎಂಬುವವರು ಮೃತಪಟ್ಟಿದ್ದರು. ಬಿಸಿಲಿನ ತಾಪದ ಬಳಲಿಕೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>