<p><strong>ರಾಯಚೂರು</strong>: ‘ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು’ ಎಂದು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತ್ ರಾವ್ ಹೇಳಿದರು.</p>.<p>ಇಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭವ್ಯ ಅಧೀಕೃತ ಮಾರಾಟಗಾರ (ಡೀಲರ್ಸ್) ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಮತೋಲನಯುತ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ಕೃಷಿ ಪದ್ಧತಿಗಳ ಅಗತ್ಯತೆಯನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.</p>.<p>ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್.ಮನೋಹರ ಮಾತನಾಡಿ, ‘ಸಹಕಾರ ಇಲಾಖೆಯ ಕೃಷಿಕ ಭಾರತಿ ಕೋ-ಆಪರೇಟೀವ್ ನಿಯಮಿತ (ಕ್ರೀಬ್ಕೋ) ಇಂದು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಉತ್ಪಾದಿಸುವ ಬೃಹತ್ ಕೈಗಾರಿಕೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.<p>‘ರೈತರು ಮಣ್ಣಿನ ಪರೀಕ್ಷೆಗೆ ಗಮನ ಹರಿಸಬೇಕು. ವಲಯದ ಮಣ್ಣಿಗೆ ಅನುಗುಣವಾಗಿ ಗೊಬ್ಬರದ ಬಳಕೆಯಿಂದ ಬೆಳೆಯ ಆರೋಗ್ಯ ವೃದ್ಧಿಸುವ ಮತ್ತು ಹೆಚ್ಚು ಫಸಲು ಬರಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.</p>.<p>ಕೃಷಕ ಭಾರತಿ ಕೋ-ಆಪರೇಟೀವ್ ನಿಯಮಿತದ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಶಶಿಕುಮಾರ ಇಫ್ಕೋ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಸಚಿನ್, ಪ್ರಧಾನ ವ್ಯವಸ್ಥಾಪಕ ಬಂದಯ್ಯ ಸ್ವಾಮಿ, ಲೇಕಪಾಲಕ ನರಸಿಂಹಪ್ಪ, ಪ್ರಗತಿಪರ ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು’ ಎಂದು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತ್ ರಾವ್ ಹೇಳಿದರು.</p>.<p>ಇಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭವ್ಯ ಅಧೀಕೃತ ಮಾರಾಟಗಾರ (ಡೀಲರ್ಸ್) ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಮತೋಲನಯುತ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ಕೃಷಿ ಪದ್ಧತಿಗಳ ಅಗತ್ಯತೆಯನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.</p>.<p>ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್.ಮನೋಹರ ಮಾತನಾಡಿ, ‘ಸಹಕಾರ ಇಲಾಖೆಯ ಕೃಷಿಕ ಭಾರತಿ ಕೋ-ಆಪರೇಟೀವ್ ನಿಯಮಿತ (ಕ್ರೀಬ್ಕೋ) ಇಂದು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಉತ್ಪಾದಿಸುವ ಬೃಹತ್ ಕೈಗಾರಿಕೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.</p>.<p>‘ರೈತರು ಮಣ್ಣಿನ ಪರೀಕ್ಷೆಗೆ ಗಮನ ಹರಿಸಬೇಕು. ವಲಯದ ಮಣ್ಣಿಗೆ ಅನುಗುಣವಾಗಿ ಗೊಬ್ಬರದ ಬಳಕೆಯಿಂದ ಬೆಳೆಯ ಆರೋಗ್ಯ ವೃದ್ಧಿಸುವ ಮತ್ತು ಹೆಚ್ಚು ಫಸಲು ಬರಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.</p>.<p>ಕೃಷಕ ಭಾರತಿ ಕೋ-ಆಪರೇಟೀವ್ ನಿಯಮಿತದ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಶಶಿಕುಮಾರ ಇಫ್ಕೋ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಸಚಿನ್, ಪ್ರಧಾನ ವ್ಯವಸ್ಥಾಪಕ ಬಂದಯ್ಯ ಸ್ವಾಮಿ, ಲೇಕಪಾಲಕ ನರಸಿಂಹಪ್ಪ, ಪ್ರಗತಿಪರ ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>