ವಾರ್ಡ್ಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಕ್ಯಾಂಪ್ ಪ್ರದೇಶದ ಪೊಲೀಸ್ ಠಾಣೆ ಹತ್ತಿರದ ನಲ್ಲಿ ಎದುರು ಜನರು ಸರದಿ ನಿಲ್ಲುತ್ತಿದ್ದಾರೆ. ಲಾಕ್ಡೌನ್ ಇದ್ದರೂ ಜೀವ ಉಳಿಸಿಕೊಳ್ಳಲು ಜನರು ಹೊರಬರುತ್ತಿದ್ದಾರೆ. ನಿತ್ಯ ಅಲೆದಾಡುತ್ತಿರುವುದು ಮಾತ್ರ ನಿಂತಿಲ್ಲ. ನಿತ್ಯ ನೀರಿಗಾಗಿ ಮಕ್ಕಳು, ಯುವಕರು, ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಆದರೆ ಪರಸ್ಪರ ಅಂತರ ಕಾಪಾಡಬೇಕೆಂದು ಹೇಳುವ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನೀರಿನ ಸಮಸ್ಯೆ ಪರಿಹಾರ ಮಾಡುವ ಗೋಜಿಗೆ ಹೋಗಿಲ್ಲ.