<p><strong>ಮಸ್ಕಿ:</strong> ‘ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬಂದಾಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾದ್ಯ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಪಟ್ಟಣದ ದೇವನಾಂಪ್ರಿಯ ಸರ್ಕಾರಿಪದವಿ ಕಾಲೇಜಿನಿಂದ ಒಂದು ವಾರಗಳ ಕಾಲ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ (ಎನ್ಎಸ್ಎಸ್)ದಲ್ಲಿ ಮಂಗಳವಾರ ಅವರು ಮಾತನಾಡಿದರು.</p>.<p>ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ‘ಕೃತಕ ಬುದ್ಧಿಮತ್ತೆ ಆಧುನಿಕ ಜಗತ್ತಿನಲ್ಲಿ ಒಂದು ವರದಾನವಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಫಲಿತಾಂಶ ಅದ್ಭುತವಾಗಿರುತ್ತದೆ’ ಎಂದರು.</p>.<p>ಡಾ.ಶಿವಶರಣಪ್ಪ ಇತ್ಲಿ, ಪ್ರಾಂಶುಪಾಲ ಮಹಾಂತಗೌಡ ಪಾಟೀಲ, ಶಿವ ಗ್ಯಾನಪ್ಪ ಲಕ್ಕುಂದಿ ಮಾತನಾಡಿದರು. ಸಣ್ಣಪ್ಪ ನಾಯಕ ಸ್ವಾಗತಿಸಿದರು. ಇಮಾಮ್ ಸಾಬ್ ನಿರೂಪಿಸಿದರು.</p>
<p><strong>ಮಸ್ಕಿ:</strong> ‘ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬಂದಾಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾದ್ಯ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಪಟ್ಟಣದ ದೇವನಾಂಪ್ರಿಯ ಸರ್ಕಾರಿಪದವಿ ಕಾಲೇಜಿನಿಂದ ಒಂದು ವಾರಗಳ ಕಾಲ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ (ಎನ್ಎಸ್ಎಸ್)ದಲ್ಲಿ ಮಂಗಳವಾರ ಅವರು ಮಾತನಾಡಿದರು.</p>.<p>ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ‘ಕೃತಕ ಬುದ್ಧಿಮತ್ತೆ ಆಧುನಿಕ ಜಗತ್ತಿನಲ್ಲಿ ಒಂದು ವರದಾನವಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಫಲಿತಾಂಶ ಅದ್ಭುತವಾಗಿರುತ್ತದೆ’ ಎಂದರು.</p>.<p>ಡಾ.ಶಿವಶರಣಪ್ಪ ಇತ್ಲಿ, ಪ್ರಾಂಶುಪಾಲ ಮಹಾಂತಗೌಡ ಪಾಟೀಲ, ಶಿವ ಗ್ಯಾನಪ್ಪ ಲಕ್ಕುಂದಿ ಮಾತನಾಡಿದರು. ಸಣ್ಣಪ್ಪ ನಾಯಕ ಸ್ವಾಗತಿಸಿದರು. ಇಮಾಮ್ ಸಾಬ್ ನಿರೂಪಿಸಿದರು.</p>