ಮುದಗಲ್: ಕುಡಿವ ನೀರಿನ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಪಟ್ಟಣದಲ್ಲಿ ಹತ್ತು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು ಪಟ್ಟಣದ ನಾಗರಿಕರು ಕುಡಿಯುವ ನೀರಿಗಾಗಿ ಬೇರೆ ಬೇರೆ ವಾರ್ಡ್ಗಳಿಗೆ ಅಲೆಯುವ ಸ್ಥಿತಿ ಎದುರಾಗಿದ್ದು ಸಮರ್ಪಕ ಕುಡಿವ ನೀರಿನ ಸೌಲಭ್ಯ ಕಲ್ಪಿಸಿ ಎಂದು ಪುರಸಭೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕುಗಿ, ಪುರಸಭೆ ಬಾಗಿಲು ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಸಮರ್ಪಕವಾಗಿ ಕುಡಿವ ನೀರಿನ ಸೌಲಭ್ಯ ಕಲ್ಪಿಸುವವರಿಗೆ ಜನರಿಂದ ನೀರಿನ ತೆರಿಗೆ ಪಡೆಯಬಾರದು ಎಂದು ಒತ್ತಾಯಿಸಿದರು.
15 ದಿನ ಒಳಗಾಗಿ ಸಮರ್ಪಕ ನೀರಿನ ಕಲ್ಪಿಸದಿದ್ದರೆ. ಪಟ್ಟಣದ ಮಹಿಳೆಯರೊಂದಿಗೆ ಸೇರಿ ಪುರಸಭೆ ಮುಂದೆ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುದಗಲ್ ಘಟಕ ಅಧ್ಯಕ್ಷ ಎಸ್.ಎ.ನಯೀಮ್, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಖಾದ್ರಿ, ಮಹಾಂತೇಶ ಚೆಟ್ಟರ್, ವಿರೂಪಾಕ್ಷಿ ಹೂಗಾರ್, ಅಬ್ದುಲ್ ಮಜೀದ್, ಸಾಬೀರ್ ಪಾಷಾ, ಜಮೀರ್, ಗ್ಯಾನಪ್ಪ, ಮಾಜಿ ಕಿಲ್ಲಾ, ಹನೀಫ್ ಖಾನ್, ಚನ್ನಪ್ಪ ಇದ್ದರು.