ಮುದಗಲ್: ‘ಮೊಬೈಲ್, ಟ್ಯಾಬ್, ಲ್ಯಾಪ್ಟ್ಯಾಪ್ಗಳಂತ ಆಧುನಿಕ ತಂತ್ರಜ್ಞಾನದ ಪರಿಕಾರಗಳನ್ನು ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಳ್ಳಬೇಕು‘ ಎಂದು ಲಿಂಗಸುಗೂರು ಕರ್ನಾಟಕ ಜಾನಪದ ಪರಿಷತ್ತು ಮಹಿಳಾ ಘಟಕದ ಗೌರವಾಧ್ಯಕ್ಷೆ ಶಿವಮ್ಮ ಪಟ್ಟದಕಲ್ ಹೇಳಿದರು.
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ನಾಗರಾಳ ಸಜ್ಜಲಶ್ರೀ ಕಾಲೇಜು, ರಾಯಚೂರು ಕರ್ನಾಟಕ ಜಾನಪದ ಪರಿಷತ್ತು, ಲಿಂಗಸುಗೂರು ತಾಲ್ಲೂಕು ಜಾನಪದ ಪರಿಷತ್ತು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ರಸಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಜ್ಜಲಗುಡ್ಡ-ಕಂಬಳಿಹಾರ ಮಠದ ದೊಡ್ಡಬಸವಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗಂಗಾಧರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ಶಿವಶರಣೆ ಶರಣಮ್ಮನವರ ಭಾವಚಿತ್ರಕ್ಕೆ ಲಕ್ಷೀದೇವಿ ಎಲ್. ನಡವಿನಮನಿ ಅವರು ಹೂಮಾಲೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ರಾಮಣ್ಣ ಚಿಲಕದ್, ಉಪಾಧ್ಯಕ್ಷೆ ಲಕ್ಕವ್ವ ಸಾಬಣ್ಣ ಮಸೂತಿ, ಹೊನ್ನಪ್ಪ ಮೇಟಿ, ಹನಮಂತಪ್ಪ ನಾಲತವಾಡ, ಸಾಬಣ್ಣ ಮಕ್ಕಣ್ಣನವರ, ಬಾಲಪ್ಪ ಕನಕೇರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಯಮನೂರಪ್ಪ, ಸಾವಿತ್ರಿ ಜಹಗೀರದಾರ್, ಮಲ್ಲಮ್ಮ ಹೊಸಮನಿ, ದೊಡ್ಡಪ್ಪ ಮೇಟಿ, ಶರಣಪ್ಪ ಕುರಿ ಇದ್ದರು.