<p><strong>ರಾಯಚೂರು:</strong> ‘ಕುವೆಂಪು ಬರಹಗಾರರಷ್ಟೇ ಅಲ್ಲ, ಸಮಾಜವನ್ನು ಮೌಲ್ಯಾತ್ಮಕವಾಗಿ ಕಟ್ಟಲು ಬೇಕಾದ ವಿಚಾರಧಾರೆ’ ಎಂದು ಸಾಹಿತಿ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.</p>.<p>ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ಕುವೆಂಪು ಚಿಂತನೆಗಳ ಸಮಕಾಲೀನತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಚರಿತ್ರೆಯ ಗಾಲಿಗಳನ್ನು ಮೌಢ್ಯದ ಮೂಲಕ ಹಿಂದಕ್ಕೆ ಎಳೆಯುವವರು ಇರುವಾಗ ಕುವೆಂಪುವಿನಂಥ ಮಹತ್ವದ ಬರಹಗಾರರು ಚರಿತ್ರೆಯ ಗಾಲಿಗಳನ್ನು ಮುಂದಕ್ಕೆ ಒಯ್ಯಬಲ್ಲರು. ಅವರು ಸಾಮಾನ್ಯ ಅನ್ನುವುದಿಲ್ಲ, ಬದಲಾಗಿ ಶ್ರೀಸಾಮಾನ್ಯ ಅನ್ನುತ್ತಾರೆ. ರೈತರಿಗೆ ನೇಗಿಲಯೋಗಿ ಅನ್ನುತ್ತಾರೆ. ಇದು ಕುವೆಂಪು ಅವರ ಕಾಳಜಿ’ ಎಂದು ವಿಶ್ಲೇಷಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ಕುವೆಂಪು ಒಂದು ಪ್ರಜ್ಞೆಯಾಗಿ, ಅರಿವಾಗಿ ನಮಗೆ ಗೋಚರವಾಗುತ್ತಾರೆ‘ ಎಂದು ತಿಳಿಸಿದರು.</p>.<p>‘ಕುವೆಂಪು ವಿಚಾರಧಾರೆ ನವೋದಯ, ನವ್ಯ, ದಲಿತ-ಬಂಡಾಯ ಸೇರಿದಂತೆ ಕನ್ನಡ ಸಾಹಿತ್ಯದ ಪ್ರಮುಖ ಕಾಲಘಟ್ಟಗಳನ್ನು ಪ್ರಭಾವಿಸಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕುವೆಂಪು ನಾಟಕಗಳಲ್ಲಿ ವೈಚಾರಿಕತೆ’ ವಿಷಯ ಮಂಡಿಸಿದ ಬಾಗಲಕೋಟೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಕಟಗಿಹಳ್ಳಿಮಠ, ಕುವೆಂಪು ಅವರು ಪದವಿ ವಿದ್ಯಾರ್ಥಿಯಾಗಿದ್ದಾಗಲೇ ‘ಜಲಗಾರ’ ನಾಟಕ ರಚಿಸಿದರು. ಅವರ ಎಲ್ಲ ನಾಟಕಗಳ ಕೇಂದ್ರ ವೈಚಾರಿಕತೆಯೇ ಆಗಿದೆ‘ ಎಂದರು.</p>.<p>ವಿಜ್ಞಾನ ನಿಕಾಯದ ಡೀನ್ ಲತಾ ಎಂ.ಎಸ್., ಹಣಕಾಸು ಅಧಿಕಾರಿ ಸುಯಮೀಂದ್ರ ಕುಲಕರ್ಣಿ, ಉಪನ್ಯಾಸಕ ಶಿವರಾಜ ಯತಗಲ್ ಉಪಸ್ಥಿತರಿದ್ದರು.</p>.<p>ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಪಾರ್ವತಿ ಸಿ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಾಜೇಶ್ವರಿ ನಿರೂಪಿಸಿದರು. ಶರಣಪ್ಪ ಚಲವಾದಿ ಸ್ವಾಗತಿಸಿದರು. ಗೀತಾಂಜಲಿ ವಂದಿಸಿದರು.</p>.<p>ಇದೇ ಸಂದರ್ಭದಲ್ಲಿ ಪ್ರತಿಭಾ ಗೋನಾಳ್ ಸಂಗಡಿಗರಿಂದ ಕುವೆಂಪು ಗೀತೆಗಳ ಗಾಯನ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ‘ಕುವೆಂಪು ಬರಹಗಾರರಷ್ಟೇ ಅಲ್ಲ, ಸಮಾಜವನ್ನು ಮೌಲ್ಯಾತ್ಮಕವಾಗಿ ಕಟ್ಟಲು ಬೇಕಾದ ವಿಚಾರಧಾರೆ’ ಎಂದು ಸಾಹಿತಿ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.</p>.<p>ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ಕುವೆಂಪು ಚಿಂತನೆಗಳ ಸಮಕಾಲೀನತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಚರಿತ್ರೆಯ ಗಾಲಿಗಳನ್ನು ಮೌಢ್ಯದ ಮೂಲಕ ಹಿಂದಕ್ಕೆ ಎಳೆಯುವವರು ಇರುವಾಗ ಕುವೆಂಪುವಿನಂಥ ಮಹತ್ವದ ಬರಹಗಾರರು ಚರಿತ್ರೆಯ ಗಾಲಿಗಳನ್ನು ಮುಂದಕ್ಕೆ ಒಯ್ಯಬಲ್ಲರು. ಅವರು ಸಾಮಾನ್ಯ ಅನ್ನುವುದಿಲ್ಲ, ಬದಲಾಗಿ ಶ್ರೀಸಾಮಾನ್ಯ ಅನ್ನುತ್ತಾರೆ. ರೈತರಿಗೆ ನೇಗಿಲಯೋಗಿ ಅನ್ನುತ್ತಾರೆ. ಇದು ಕುವೆಂಪು ಅವರ ಕಾಳಜಿ’ ಎಂದು ವಿಶ್ಲೇಷಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ಕುವೆಂಪು ಒಂದು ಪ್ರಜ್ಞೆಯಾಗಿ, ಅರಿವಾಗಿ ನಮಗೆ ಗೋಚರವಾಗುತ್ತಾರೆ‘ ಎಂದು ತಿಳಿಸಿದರು.</p>.<p>‘ಕುವೆಂಪು ವಿಚಾರಧಾರೆ ನವೋದಯ, ನವ್ಯ, ದಲಿತ-ಬಂಡಾಯ ಸೇರಿದಂತೆ ಕನ್ನಡ ಸಾಹಿತ್ಯದ ಪ್ರಮುಖ ಕಾಲಘಟ್ಟಗಳನ್ನು ಪ್ರಭಾವಿಸಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕುವೆಂಪು ನಾಟಕಗಳಲ್ಲಿ ವೈಚಾರಿಕತೆ’ ವಿಷಯ ಮಂಡಿಸಿದ ಬಾಗಲಕೋಟೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಕಟಗಿಹಳ್ಳಿಮಠ, ಕುವೆಂಪು ಅವರು ಪದವಿ ವಿದ್ಯಾರ್ಥಿಯಾಗಿದ್ದಾಗಲೇ ‘ಜಲಗಾರ’ ನಾಟಕ ರಚಿಸಿದರು. ಅವರ ಎಲ್ಲ ನಾಟಕಗಳ ಕೇಂದ್ರ ವೈಚಾರಿಕತೆಯೇ ಆಗಿದೆ‘ ಎಂದರು.</p>.<p>ವಿಜ್ಞಾನ ನಿಕಾಯದ ಡೀನ್ ಲತಾ ಎಂ.ಎಸ್., ಹಣಕಾಸು ಅಧಿಕಾರಿ ಸುಯಮೀಂದ್ರ ಕುಲಕರ್ಣಿ, ಉಪನ್ಯಾಸಕ ಶಿವರಾಜ ಯತಗಲ್ ಉಪಸ್ಥಿತರಿದ್ದರು.</p>.<p>ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಪಾರ್ವತಿ ಸಿ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಾಜೇಶ್ವರಿ ನಿರೂಪಿಸಿದರು. ಶರಣಪ್ಪ ಚಲವಾದಿ ಸ್ವಾಗತಿಸಿದರು. ಗೀತಾಂಜಲಿ ವಂದಿಸಿದರು.</p>.<p>ಇದೇ ಸಂದರ್ಭದಲ್ಲಿ ಪ್ರತಿಭಾ ಗೋನಾಳ್ ಸಂಗಡಿಗರಿಂದ ಕುವೆಂಪು ಗೀತೆಗಳ ಗಾಯನ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>