ಸ್ಥಳೀಯ ವ್ಯಕ್ತಿ ಸೇರಿ ಮೂವರು ಅಗ್ನಿಶಾಮಕ ಸಿಬ್ಬಂದಿಯು ಚನ್ನಬಸವನನ್ನು ಹಗ್ಗದ ನೆರವಿನಿಂದ ಸುರಕ್ಷಿತ ಜಾಗಕ್ಕೆ ಕರೆತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಗ್ಗ ತುಂಡಾಗಿ ನಾಲ್ಕು ಜನರು ಹಳ್ಳದಲ್ಲಿ ಕೊಚ್ಚಿಹೋದರು. ಸ್ಥಳೀಯ ವ್ಯಕ್ತಿ ಈಜಿಕೊಂಡು ಪಾರಾದರು. ಚನ್ನಬಸವ ಮಾತ್ರ ಕೊಚ್ಚಿಕೊಂಡು ಹೋದ. ಪೊದೆಗಳ ಆಶ್ರಯ ಪಡೆದಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಕೂಡಾ ಅಪಾಯಕ್ಕೆ ಸಿಲುಕಿದ್ದರು. ಸಾರ್ವಜನಿಕರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಹಳ್ಳದಲ್ಲಿ ಸಿಲುಕಿದ್ದ ಜಲೀಲ್ ಹಾಗೂ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯನ್ನು ಕ್ರೇನ್ ಯಂತ್ರವನ್ನು ಬಳಸಿ ರಕ್ಷಿಸಿದ್ದಾರೆ.