ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೂರ್ಯಪ್ರಕಾಶ ಎನ್ನುವ ವ್ಯಕ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರುವ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸುತ್ತೇನೆ ಎಂದು ಆವಾಜ್ ಹಾಕಿದ್ದಾರೆ. ಈ ಬಗ್ಗೆ ಮೇ 31ರಂದು ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಕೆಳ ಜಾತಿಯವರೆಂದು ದೂರು ಸ್ವೀಕರಿಸಿಲ್ಲ. ಪಿಎಸ್ಐ ಸದ್ದಾಮ್ ಹುಸೇನ್ ಮೊದಲು ದೂರು ದಾಖಲಿಸಿಕೊಳ್ಳಲಿಲ್ಲ ಆನಂತರ ಪರಿಪರಿಯಾಗಿ ಮನವಿ ಮಾಡಿದಾಗ ದೂರು ದಾಖಲಿಸಿದ್ದಾರೆ ಎಂದರು.