ತಾಂಡಾದ ನಿವಾಸಿ ರುಕ್ಮವ್ವ ಎಂಬುವರ ಮನೆಯಲ್ಲಿ 8 ಲೀಟರ್ ಕಳ್ಳಭಟ್ಟಿ ಪತ್ತೆಯಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಅಬಕಾರಿ ಉಪ ನಿರೀಕ್ಷಕ ಬಸಲಿಂಗಪ್ಪ, ಲಿಂಗಸೂಗೂರು ಅಬಕಾರಿ ನಿರೀಕ್ಷಕಿ ಸರಸ್ವತಿ, ರಾಯಚೂರು ಡಿಸಿಸಿಬಿ ಅಬಕಾರಿ ನಿರೀಕ್ಷಕಿ ಶೈಲಜಾ, ಸಿಂಧನೂರ ಅಬಕಾರಿ ನಿರೀಕ್ಷಕ ಸಿದ್ಧಾರೂಢ, ಅಬಕಾರಿ ಉಪ ನಿರೀಕ್ಷಕಾರದ ಲಿಂಗರಾಜು, ಯಮನೂರು ಮತ್ತು ಮುದಗಲ್ ಪೊಲೀಸ್ ಠಾಣೆ ಸಿಬ್ಬಂದಿ ಆಂಜನೇಯ ಇದ್ದರು.