’ಮಾರ್ಚ್ನಿಂದ ಮೇ 17 ರವರೆಗೂ ವಾಡಿಕೆಯಂತೆ 48 ಎಂಎಂ ಮಳೆ ಸುರಿಯಬೇಕು. ಆದರೆ, ರಾಯಚೂರು ಜಿಲ್ಲೆಯಲ್ಲಿ ಮಳೆ ಆಗಿಲ್ಲ. ಹೀಗಾಗಿ ಹಿಂಗಾರು ಕೊಯ್ಲಿಗೆ ಅನುಕೂಲವಾಗಿದ್ದು, ಜಮೀನುಗಳಲ್ಲಿದ್ದ ಬಹುತೇಕ ಭತ್ತ ಎತ್ತುವಳಿಯಾದ ಬಳಿಕವೇ ಮಳೆ ಆಗುತ್ತಿರುವುದು ಒಳ್ಳೆಯದಾಗಿದೆ. ಏಪ್ರಿಲ್ ಹಾಗೂ ಮೇ ಆರಂಭದಲ್ಲಿ ನೆರೆಯ ಯಾದರಿರಿ, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಾದರೂ ರಾಯಚೂರಿನಲ್ಲಿ ಆಗದಿರುವುದು ರೈತರಿಗೆ ಆಗ ಕೂಡಾ ಒಳ್ಳೆಯದೇ ಆಗಿತ್ತು. ರಾಯಚೂರು ಜಿಲ್ಲೆಗೆ ಈ ವರ್ಷ ಮುಂಗಾರು ಪ್ರವೇಶ ಸ್ವಲ್ಪ ತಡವಾಗುತ್ತದೆ ಎನ್ನುವ ಮುನ್ಸೂಚನೆ ಇದೆ‘ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.