<p><strong>ಹಟ್ಟಿ ಚಿನ್ನದ ಗಣಿ:</strong> ಜಿಟಿಜಿಟಿ ಮಳೆ ಪರಿಣಾಮ ಹಟ್ಟಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಕೊಳೆಯುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಸಧ್ಯ ಉಳ್ಳಾಗಡ್ಡಿಗೆ ಬೆಲೆ ಇಲ್ಲ.</p>.<p>ಅಧಿಕ ಮಳೆಯಿಂದ ಈರುಳ್ಳಿ ಇಳುವರಿ ಕುಸಿತ ಕಂಡಿದೆ. ಬೆಳೆಯಲು ಮಾಡಿದ ಖರ್ಚೂ ಬಾರದ ಸ್ಥಿತಿ ಇದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.</p>.<p>ಒಂದಡೆ ಮಳೆಯಿಂದ ರೈತರು ಈರುಳ್ಳಿಗೆ ಹಾನಿಯಾಗಿದ್ದರೆ ಇನ್ನೊಂಡೆ ಮಜ್ಜಿಗೆ ರೋಗ, ಶಿಲೀಂಧ್ರ ರೋಗ ಬಾಧಿಸಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಉತ್ತಮ ಆದಾಯದ ನಿರೀಕ್ಷೆಗೆ ಪೆಟ್ಟು ಬಿದ್ದಿದೆ ಎಂದು ಗೌಡೂರು ಗ್ರಾಮದ ರೈತ ಬಸವರಾಜ ಅಳಲು ತೋಡಿಕೊಂಡಿದ್ದಾರೆ.<br><br> ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿ, ಔಷದಿ ಸಿಂಪಡಣೆ, ಕಳೆ ತೆಗೆಯುವ ಕಾರ್ಯ ಸೇರಿದಂತೆ ಈರುಳ್ಳಿ ಬೆಲೆ ಬೆಳೆಯಲು ಎಕರೆಗೆ ಸುಮಾರು ₹30 ಸಾವಿರ ಖರ್ದಾಗಿದೆ. ಕಸ ಕೀಳಲು ಮತ್ತು ಹಸನಗೊಳಿಸಲು ₹15 ಸಾವಿರ ವೆಚ್ಚ ಮಾಡಿದ್ದೇವೆ. ಖರ್ಚು ಮಾಡಿದಷ್ಟು ಆದಾಯ ಸಿಕ್ಕಿಲ್ಲ. ಸರ್ಕಾರ ರೈತರ ನೆರವಿಗೆ ದಾವಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<p>‘ಈರುಳ್ಳಿ ಬೆಲೆ ಈ ವಾರ ಕೆ.ಜಿಗೆ ₹25 ಇಳಿದಿದೆ. ಕ್ವಿಂಟಲ್ಗೆ ₹4,885 ಇದ್ದ ದರ ₹3,000ಕ್ಕೆ ಕುಸಿದಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಅಬ್ದಲ್ </p>.<p><strong>ಈರುಳ್ಳಿ ಬೆಳೆದಿರುವ ರೈತರು ಮಳೆಯಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ರೈತರ ನೆರವಿಗೆ ಸರ್ಕಾರ ದಾವಿಸಲಿ </strong></p><p><strong>-ತಿಮ್ಮಣ್ಣ ಪೈದೊಡ್ಡಿ ಗ್ರಾಮದ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಜಿಟಿಜಿಟಿ ಮಳೆ ಪರಿಣಾಮ ಹಟ್ಟಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಕೊಳೆಯುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಸಧ್ಯ ಉಳ್ಳಾಗಡ್ಡಿಗೆ ಬೆಲೆ ಇಲ್ಲ.</p>.<p>ಅಧಿಕ ಮಳೆಯಿಂದ ಈರುಳ್ಳಿ ಇಳುವರಿ ಕುಸಿತ ಕಂಡಿದೆ. ಬೆಳೆಯಲು ಮಾಡಿದ ಖರ್ಚೂ ಬಾರದ ಸ್ಥಿತಿ ಇದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.</p>.<p>ಒಂದಡೆ ಮಳೆಯಿಂದ ರೈತರು ಈರುಳ್ಳಿಗೆ ಹಾನಿಯಾಗಿದ್ದರೆ ಇನ್ನೊಂಡೆ ಮಜ್ಜಿಗೆ ರೋಗ, ಶಿಲೀಂಧ್ರ ರೋಗ ಬಾಧಿಸಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಉತ್ತಮ ಆದಾಯದ ನಿರೀಕ್ಷೆಗೆ ಪೆಟ್ಟು ಬಿದ್ದಿದೆ ಎಂದು ಗೌಡೂರು ಗ್ರಾಮದ ರೈತ ಬಸವರಾಜ ಅಳಲು ತೋಡಿಕೊಂಡಿದ್ದಾರೆ.<br><br> ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿ, ಔಷದಿ ಸಿಂಪಡಣೆ, ಕಳೆ ತೆಗೆಯುವ ಕಾರ್ಯ ಸೇರಿದಂತೆ ಈರುಳ್ಳಿ ಬೆಲೆ ಬೆಳೆಯಲು ಎಕರೆಗೆ ಸುಮಾರು ₹30 ಸಾವಿರ ಖರ್ದಾಗಿದೆ. ಕಸ ಕೀಳಲು ಮತ್ತು ಹಸನಗೊಳಿಸಲು ₹15 ಸಾವಿರ ವೆಚ್ಚ ಮಾಡಿದ್ದೇವೆ. ಖರ್ಚು ಮಾಡಿದಷ್ಟು ಆದಾಯ ಸಿಕ್ಕಿಲ್ಲ. ಸರ್ಕಾರ ರೈತರ ನೆರವಿಗೆ ದಾವಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<p>‘ಈರುಳ್ಳಿ ಬೆಲೆ ಈ ವಾರ ಕೆ.ಜಿಗೆ ₹25 ಇಳಿದಿದೆ. ಕ್ವಿಂಟಲ್ಗೆ ₹4,885 ಇದ್ದ ದರ ₹3,000ಕ್ಕೆ ಕುಸಿದಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಅಬ್ದಲ್ </p>.<p><strong>ಈರುಳ್ಳಿ ಬೆಳೆದಿರುವ ರೈತರು ಮಳೆಯಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ರೈತರ ನೆರವಿಗೆ ಸರ್ಕಾರ ದಾವಿಸಲಿ </strong></p><p><strong>-ತಿಮ್ಮಣ್ಣ ಪೈದೊಡ್ಡಿ ಗ್ರಾಮದ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>