ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮೊದಲನೇ ಆಯ್ಕೆ ವಿಧಾನವನ್ನು 2015ರ ಮೇ 22ರಂದು ಸೂಚಿಸಲಾಯಿತು. ಇದರಲ್ಲಿ ಈ ಭಾಗದ ಅಭ್ಯರ್ಥಿಗಳ ವೃಂದ ಆಯ್ಕೆ ಕುರಿತ ಕೇಳಲಾಗಿತ್ತು. ಬಳಿಕ 16 ನವೆಂಬರ್ 2016ರಂದು ಮೆರಿಟ್ ಆಧಾರದಲ್ಲಿ ಇನ್ನುಳಿದ ವೃಂದದ ಹುದ್ದೆಗಳಿಗೆ ಆಯ್ಕೆ ಮಾಡಲು ಸೂಚಿಸಲಾಗಿತ್ತು. ಮೇ 23, 2019 ರಂದು ಮಿಕ್ಕುಳಿದ ವೃಂದ, ಸ್ಥಳೀಯ ವೃಂದಕ್ಕೆ ಪ್ರತ್ಯೇಕವಾಗಿ ಎರಡು ಅಧಿಸೂಚನೆ, ಎರಡು ಪರೀಕ್ಷಾ ಶುಲ್ಕ, ಒಂದು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿತ್ತು. ಬಳಿಕ 2020ರ ಜೂನ್ 6ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಯಾವ ವೃಂದ ಸೇರುತ್ತೀರಿ ಎಂದು ಆಯ್ಕೆ ಕೇಳಲಾಯಿತು. ಇದು ಗೊಂದಲಕ್ಕೆ ಕಾರಣವಾಗಿ, ಹಲವಾರು ನೇಮಕಾತಿ ಪ್ರಕ್ರಿಯೆಗಳು ಈಗಾಗಲೇ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.