ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಬಸವ ಸರ್ಕಲ್ ಹತ್ತಿರ ತೋಟಗಾರಿಕೆ ಕಚೇರಿ ಪಕ್ಕದಲ್ಲಿ ಇರುವ ಮಲ್ಲಪ್ಪಗೌಡ ಎಂಬುವರಿಗೆ ಸೇರಿದ ಖಾನಾವಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಹಾನಿ ಸಂಭವಿಸಿದೆ.
ಘಟನೆಯಲ್ಲಿ ಖಾನಾವಳಿ ಪಕ್ಕದ ಝರಾಕ್ಸ್ ಅಂಗಡಿಯಲ್ಲಿದ್ದ ಝರಾಕ್ಸ ಯಂತ್ರ ಹಾಗೂ ಕಂಪ್ಯೂಟರ್, ಪಕ್ಕದ ಪಾನ್ ಶಾಪ್ ಬೆಂಕಿಯಲ್ಲಿ ಭಸ್ಮವಾಗಿವೆ.