<p><strong>ರಾಯಚೂರು: </strong>ವಿಶ್ವದೆಲ್ಲೆಡೆ ಕೊರೊನಾ ಉಪದ್ರವ ಪರಿಹಾರವಾಗಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.</p>.<p>ಶರವನ್ನವರಾತ್ರಿ ಸಂಪನ್ನ ಹಾಗೂ ವಿಜಯದಶಮಿ ದಿನದಂದು ಭಾನುವಾರ, ಮಠದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದರು.</p>.<p>ಎಲ್ಲ ಜನರು ಸುಖಿಗಳಾಗಿ ಧರ್ಮ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವಂತಾಗಲಿ, ವಿಶೇಷವಾಗಿ ಭಗವಂತರು ಸಕಲ ಸಂತೋಷ, ಸೌಹಾರ್ದತೆ ಹಾಗೂ ಎಲ್ಲ ರೀತಿಯ ಸಮೃದ್ಧಿಯನ್ನು ಅನುಗ್ರಹಿಸಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ ಎಂದರು.</p>.<p>ಎಲ್ಲ ಭಕ್ತರಿಗೂ ಆನ್ಲೈನ್ ಮೂಲಕವೇ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆ ನೀಡಲಾಗುತ್ತಿದೆ. ಎಲ್ಲರನ್ನು ರಾಯರು ಅನುಗ್ರಹಿಸಲಿ ಎಂದು ಕೋರಿದರು.</p>.<p>ಇದಕ್ಕೂ ಮೊದಲು ವಿಜಯ ದಶಮಿ ಅಂಗವಾಗಿ ಸಂಸ್ಥಾನದ ಮೂಲರಾಮದೇವರ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು. ಈ ಸುಸಂದರ್ಭ ದಿನದಂದು 6ನೇ ತಂಡದ ಒಂಭತ್ತು ವಿದ್ಯಾರ್ಥಿಗಳಿಗೆ ರಾಯರ ಸನ್ನಿಧಾನದಲ್ಲಿ ‘ಸುಧಾಪಾಠ’ವನ್ನು ಆರಂಭಿಸಿದರು.</p>.<p>ಮಂಚಾಲಮ್ಮದೇವಿಗೆ ಪೂಜೆ: ಮಹಾನವರಾತ್ರಿ ನಿಮಿತ್ತ ಮಂತ್ರಾಲಯ ಕ್ಷೇತ್ರದ ದೇವತೆ ಮಂಚಾಲಮ್ಮನಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂಧ್ರ ತೀರ್ಥರು ಭಾನುವಾರ, ವಿಶೇಷ ಪೂಜೆ ನೆರವೇರಿಸಿದರು.</p>.<p>ಮಂಗಳವಾದ್ಯಗಳೊಂದಿಗೆ ಪುಷ್ಪಮಾಲೆ ಸಮರ್ಪಣೆ, ಮಹಾಮಂಗಳಾರತಿ ಹಾಗೂ ಅಕ್ಷತೆ ಪೂಜೆ ವಿಶೇಷವಾಗಿತ್ತು. ಮಠದ ಪಂಡಿತರು, ಸಿಬ್ಬಂದಿ ಹಾಗೂ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ವಿಶ್ವದೆಲ್ಲೆಡೆ ಕೊರೊನಾ ಉಪದ್ರವ ಪರಿಹಾರವಾಗಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.</p>.<p>ಶರವನ್ನವರಾತ್ರಿ ಸಂಪನ್ನ ಹಾಗೂ ವಿಜಯದಶಮಿ ದಿನದಂದು ಭಾನುವಾರ, ಮಠದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದರು.</p>.<p>ಎಲ್ಲ ಜನರು ಸುಖಿಗಳಾಗಿ ಧರ್ಮ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವಂತಾಗಲಿ, ವಿಶೇಷವಾಗಿ ಭಗವಂತರು ಸಕಲ ಸಂತೋಷ, ಸೌಹಾರ್ದತೆ ಹಾಗೂ ಎಲ್ಲ ರೀತಿಯ ಸಮೃದ್ಧಿಯನ್ನು ಅನುಗ್ರಹಿಸಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ ಎಂದರು.</p>.<p>ಎಲ್ಲ ಭಕ್ತರಿಗೂ ಆನ್ಲೈನ್ ಮೂಲಕವೇ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆ ನೀಡಲಾಗುತ್ತಿದೆ. ಎಲ್ಲರನ್ನು ರಾಯರು ಅನುಗ್ರಹಿಸಲಿ ಎಂದು ಕೋರಿದರು.</p>.<p>ಇದಕ್ಕೂ ಮೊದಲು ವಿಜಯ ದಶಮಿ ಅಂಗವಾಗಿ ಸಂಸ್ಥಾನದ ಮೂಲರಾಮದೇವರ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು. ಈ ಸುಸಂದರ್ಭ ದಿನದಂದು 6ನೇ ತಂಡದ ಒಂಭತ್ತು ವಿದ್ಯಾರ್ಥಿಗಳಿಗೆ ರಾಯರ ಸನ್ನಿಧಾನದಲ್ಲಿ ‘ಸುಧಾಪಾಠ’ವನ್ನು ಆರಂಭಿಸಿದರು.</p>.<p>ಮಂಚಾಲಮ್ಮದೇವಿಗೆ ಪೂಜೆ: ಮಹಾನವರಾತ್ರಿ ನಿಮಿತ್ತ ಮಂತ್ರಾಲಯ ಕ್ಷೇತ್ರದ ದೇವತೆ ಮಂಚಾಲಮ್ಮನಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂಧ್ರ ತೀರ್ಥರು ಭಾನುವಾರ, ವಿಶೇಷ ಪೂಜೆ ನೆರವೇರಿಸಿದರು.</p>.<p>ಮಂಗಳವಾದ್ಯಗಳೊಂದಿಗೆ ಪುಷ್ಪಮಾಲೆ ಸಮರ್ಪಣೆ, ಮಹಾಮಂಗಳಾರತಿ ಹಾಗೂ ಅಕ್ಷತೆ ಪೂಜೆ ವಿಶೇಷವಾಗಿತ್ತು. ಮಠದ ಪಂಡಿತರು, ಸಿಬ್ಬಂದಿ ಹಾಗೂ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>