<p><strong>ಸಿಂಧನೂರು</strong>: ತಾಲ್ಲೂಕಿನ ಗುಡದಮ್ಮ ಕ್ಯಾಂಪ್ನ ಖಾಸಗಿ ಶಾಲೆವೊಂದರ ಚಾಲಕ ವಿದ್ಯಾರ್ಥಿಯ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ವೆಂಕಟೇಶ ದೂರಿದ್ದಾರೆ.</p>.<p>ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುವ ಪುತ್ರ ಅಖಿಲ್ ಸೋಮವಾರ ತಿಡಿಗೋಳ ಗ್ರಾಮದಿಂದ ಗುಡದಮ್ಮ ಕ್ಯಾಂಪಿಗೆ ಖಾಸಗಿ ಶಾಲೆಯ ಬಸ್ ಮೂಲಕ ಶಾಲೆಗೆ ಬಂದಿದ್ದು, ಇಳಿಯುವ ಸಮಯದಲ್ಲಿ ಚಾಲಕ ಕಟ್ಟಿಗೆಯಿಂದ ಹೊಡೆದು ಹಲ್ಲೆಗೊಳಿಸಿದ್ದು, ಮೈತುಂಬ ಬಾಸುಂಡೆ ಬಂದಿವೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದರು.</p>.<p>ಘಟನೆ ಕುರಿತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿರುಪಣ್ಣ ಸಾಹುಕಾರ ಮಾಹಿತಿ ನೀಡಿ,‘ಬಸ್ನಿಂದ ವಿದ್ಯಾರ್ಥಿಯು ಕೆಳಗೆ ಜಿಗಿಯಲು ಪ್ರಯತ್ನಿಸಿದ ಕಾರಣಕ್ಕೆ ಹಿಡಿದು ಕುಳ್ಳಿರಿಸಿ ಕೈಯಿಂದ ತಲೆಗೆ ಬಡಿದಿರುವುದಾಗಿ ಚಾಲಕ ಹೇಳಿದ್ದಾನೆ. ಆದಾಗ್ಯೂ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಮಾಧ್ಯಮದಲ್ಲಿ ವರದಿ ನೋಡಿ ವಿದ್ಯಾರ್ಥಿಯ ಪಾಲಕ ವೆಂಕಟೇಶ ಅವರನ್ನು ಸಂಪರ್ಕಿಸಿ ಘಟನೆಯ ಕುರಿತು ದೂರು ನೀಡುವಂತೆ ಕೋರಿದ್ದು, ಅವರು ಸ್ಪಂದನೆ ನೀಡಿಲ್ಲ’ ಎಂದು ತುರ್ವಿಹಾಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಜಾತ ಪ್ರಜಾವಾಣಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು</strong>: ತಾಲ್ಲೂಕಿನ ಗುಡದಮ್ಮ ಕ್ಯಾಂಪ್ನ ಖಾಸಗಿ ಶಾಲೆವೊಂದರ ಚಾಲಕ ವಿದ್ಯಾರ್ಥಿಯ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ವೆಂಕಟೇಶ ದೂರಿದ್ದಾರೆ.</p>.<p>ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುವ ಪುತ್ರ ಅಖಿಲ್ ಸೋಮವಾರ ತಿಡಿಗೋಳ ಗ್ರಾಮದಿಂದ ಗುಡದಮ್ಮ ಕ್ಯಾಂಪಿಗೆ ಖಾಸಗಿ ಶಾಲೆಯ ಬಸ್ ಮೂಲಕ ಶಾಲೆಗೆ ಬಂದಿದ್ದು, ಇಳಿಯುವ ಸಮಯದಲ್ಲಿ ಚಾಲಕ ಕಟ್ಟಿಗೆಯಿಂದ ಹೊಡೆದು ಹಲ್ಲೆಗೊಳಿಸಿದ್ದು, ಮೈತುಂಬ ಬಾಸುಂಡೆ ಬಂದಿವೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದರು.</p>.<p>ಘಟನೆ ಕುರಿತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿರುಪಣ್ಣ ಸಾಹುಕಾರ ಮಾಹಿತಿ ನೀಡಿ,‘ಬಸ್ನಿಂದ ವಿದ್ಯಾರ್ಥಿಯು ಕೆಳಗೆ ಜಿಗಿಯಲು ಪ್ರಯತ್ನಿಸಿದ ಕಾರಣಕ್ಕೆ ಹಿಡಿದು ಕುಳ್ಳಿರಿಸಿ ಕೈಯಿಂದ ತಲೆಗೆ ಬಡಿದಿರುವುದಾಗಿ ಚಾಲಕ ಹೇಳಿದ್ದಾನೆ. ಆದಾಗ್ಯೂ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಮಾಧ್ಯಮದಲ್ಲಿ ವರದಿ ನೋಡಿ ವಿದ್ಯಾರ್ಥಿಯ ಪಾಲಕ ವೆಂಕಟೇಶ ಅವರನ್ನು ಸಂಪರ್ಕಿಸಿ ಘಟನೆಯ ಕುರಿತು ದೂರು ನೀಡುವಂತೆ ಕೋರಿದ್ದು, ಅವರು ಸ್ಪಂದನೆ ನೀಡಿಲ್ಲ’ ಎಂದು ತುರ್ವಿಹಾಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಜಾತ ಪ್ರಜಾವಾಣಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>