ಕಾಲೇಜಿನ ಪ್ರಾಂಶುಪಾಲ ಫಾದರ್ ಅರುಣ ಲೂಯಿಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಬಿ.ಕಾಂ. ಮೊದಲ ಸೆಮಿಸ್ಟರ್ನಿಂದಲೂ ಕುಮಾರ ನಾಯಕ್ ಕ್ಲಾಸ್ಗೆ ಸರಿಯಾಗಿ ಬರುತ್ತಿರಲಿಲ್ಲ. ವಿಶ್ವವಿದ್ಯಾಲಯದ ನಿಯಮಾನುಸಾರ ಕಳೆದ ಮಾರ್ಚ್ 2 ರಂದು ಪಾಲಕರಿಗೆ ಈ ಬಗ್ಗೆ ನೋಟಿಸ್ವೊಂದನ್ನು ಕಳುಹಿಸಲಾಗಿತ್ತು. ಈಗ ನಾಲ್ಕನೇ ಸೆಮಿಸ್ಟರ್ನಲ್ಲಿ ಕೇವಲ 17 ದಿನಗಳು ಮಾತ್ರ ಕ್ಲಾಸ್ಗೆ ಹಾಜರಿಯಾಗಿದ್ದ. ಕಾಲೇಜಿಗೆ ಗೈರುಹಾಜರಿಯಾಗಿದ್ದ ಒಟ್ಟು ಏಳು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನಿರಾಕರಿಸಲಾಗಿತ್ತು. ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಆರಂಭದಿಂದಲೂ ಕುಮಾರನಾಯಕ್ ಹಾಲ್ ಟಿಕೆಟ್ ಕೇಳುವುದಕ್ಕೂ ಬಂದಿರಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.