ತಾಲ್ಲೂಕಿನ ಗೋನಾಳ ಹತ್ತಿರ ಎನ್ಆರ್ಬಿಸಿ ಕಾಲುವೆ ಕೊಚ್ಚಿಹೋಗಿರುವ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂಜಿನಿಯರ್ ವರದಿ ನೀಡಿದ ಬಳಿಕ ತಪ್ಪು ಕಂಡುಬಂದರೆ ಕ್ರಮ ಜರುಗಿಸಲಾಗುತ್ತದೆ. ಕಾಲುವೆ ನೀರಿನಿಂದ ಜಮೀನು ಹಾಳಾಗಿದ್ದರಿಂದ ಅತೀವೃಷ್ಟಿ ನಿಯಮದಡಿ ಸಂತ್ರಸ್ತರಿಗೆ ಪರಿಹಾರ ದೊರಕಿಸಲಾಗುತ್ತದೆ. 2009ರಲ್ಲಿ ಪ್ರವಾಹಕ್ಕೀಡಾದ ಗ್ರಾಮಗಳನ್ನು ಸ್ಥಳಾಂತರಿಸಿದರೂ, ಜನರು ಹೋಗಿಲ್ಲ. ಆದ್ದರಿಂದ, ಸ್ಥಳಾಂತರ ಗ್ರಾಮಗಳ ಆಸರೆ ಮನೆಗಳ ಸ್ಥಿತಿಗತಿಯ ಬಗ್ಗೆ ವರದಿ ತರಿಸಿಕೊಂಡು ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ವರದಿ ಕೊಡಲಾಗುತ್ತದೆ ಎಂದು ವಿವರಿಸಿದರು.