<p><strong>ಸಿಂಧನೂರು: </strong>ಧಾರವಾಡದ ರಾಜೀವಗಾಂಧಿನಗರದ ಓಂ ಶ್ರೀ ಭಂಡಾರದ ಒಡೆಯ ಹಾಗೂ ಆದಿಶಕ್ತಿ ಎಣ್ಣೆ ಹೊಳೆಯಮ್ಮ ದೇವಿ ದೇವಸ್ಥಾನದ ಮೈಲಾರಲಿಂಗ ಸ್ವಾಮಿ ಅವರು ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಬೆಟ್ಟದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಮೆಟ್ಟಿಲುಗಳ ಮೇಲೆಯೇ ಉರುಳುಸೇವೆ ಮಾಡಿದರು.</p>.<p>ಲೋಕ ಕಲ್ಯಾಣಾರ್ಥವಾಗಿ ಮಂಬರುವ ದಿನಗಳಲ್ಲಿ ಪ್ರಕೃತಿ ವಿಕೋಪಗಳು, ರೋಗ-ರುಜಿನುಗಳು ಮನುಕುಲಕ್ಕೆ ಪರಿಣಾಮ ಬೀರಬಾರದೆಂಬ ಪ್ರಾರ್ಥನೆಯೊಂದಿಗೆ ಉರುಳುಸೇವೆ ಮಾಡುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.</p>.<p>ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ 541 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಮೇಲೆ ಬಟ್ಟೆ ಹಾಕಲಾಗಿತ್ತು. ವಾಪಸ್ ಉರುಳುಸೇವೆ ಮಾಡುತ್ತಾ ಕೆಳಗಿಳಿದರು. ಆನಂತರ ತಾಲ್ಲೂಕಿನ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಕ್ಷೇತ್ರದಲ್ಲಿ ಉರುಳು ಸೇವೆ ಮಾಡಿ ದರ್ಶನ ಪಡೆದರು.<br />ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಬೆಟ್ಟವನ್ನೇರಿ ಪ್ರಾರ್ಥನೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು: </strong>ಧಾರವಾಡದ ರಾಜೀವಗಾಂಧಿನಗರದ ಓಂ ಶ್ರೀ ಭಂಡಾರದ ಒಡೆಯ ಹಾಗೂ ಆದಿಶಕ್ತಿ ಎಣ್ಣೆ ಹೊಳೆಯಮ್ಮ ದೇವಿ ದೇವಸ್ಥಾನದ ಮೈಲಾರಲಿಂಗ ಸ್ವಾಮಿ ಅವರು ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಬೆಟ್ಟದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಮೆಟ್ಟಿಲುಗಳ ಮೇಲೆಯೇ ಉರುಳುಸೇವೆ ಮಾಡಿದರು.</p>.<p>ಲೋಕ ಕಲ್ಯಾಣಾರ್ಥವಾಗಿ ಮಂಬರುವ ದಿನಗಳಲ್ಲಿ ಪ್ರಕೃತಿ ವಿಕೋಪಗಳು, ರೋಗ-ರುಜಿನುಗಳು ಮನುಕುಲಕ್ಕೆ ಪರಿಣಾಮ ಬೀರಬಾರದೆಂಬ ಪ್ರಾರ್ಥನೆಯೊಂದಿಗೆ ಉರುಳುಸೇವೆ ಮಾಡುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.</p>.<p>ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ 541 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಮೇಲೆ ಬಟ್ಟೆ ಹಾಕಲಾಗಿತ್ತು. ವಾಪಸ್ ಉರುಳುಸೇವೆ ಮಾಡುತ್ತಾ ಕೆಳಗಿಳಿದರು. ಆನಂತರ ತಾಲ್ಲೂಕಿನ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಕ್ಷೇತ್ರದಲ್ಲಿ ಉರುಳು ಸೇವೆ ಮಾಡಿ ದರ್ಶನ ಪಡೆದರು.<br />ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಬೆಟ್ಟವನ್ನೇರಿ ಪ್ರಾರ್ಥನೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>