ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಹುಂಡಿ ಕಳವು; ಒಬ್ಬ ಬಂಧನ

Last Updated 9 ಮೇ 2022, 3:03 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದ ಹೊರ ವಲಯದ ಲಿಂಗಸುಗೂರು ರಸ್ತೆ ಬದಿಯ ವಾಸುಕಿ ಸುಬ್ರಹ್ಮಣ್ಯೇಶ್ವರ ಮೂರ್ತಿ ಭಗ್ನಗೊಳಿಸಿ ಹಾಗೂ ದೇಗುಲ ಹುಂಡಿ ಕಳವು ಪ್ರಕರಣದ ಆರೋಪಿಯನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ.

ಮರಳಿ ಗ್ರಾಮದ ನಿವಾಸಿ ಶರಣಬಸವ ಬಸಪ್ಪ ಬಂಧಿತ ಆರೋಪಿ.

ರಾಮಲಿಂಗೇಶ್ವರ ದೇಗುಲ ಹುಂಡಿ ಮತ್ತು ನೀಲಕಂಠೇಶ್ವರ ದೇವಸ್ಥಾನದ ಹನುಮಂತ ದೇವರ ಹುಂಡಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾವರಗೇರಾ ಸೇರಿದಂತೆ ವಿವಿಧೆಡೆ ಕದ್ದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ನೇತೃತ್ವದಲ್ಲಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT