ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ದಿಢೀರ್ ಹರಿದ ಜಲಪಾತದಲ್ಲಿ ಇಬ್ಬರು ಕಣ್ಮರೆ

Last Updated 23 ಜುಲೈ 2020, 15:49 IST
ಅಕ್ಷರ ಗಾತ್ರ

ಹಟ್ಟಿಚಿನ್ನದ ಗಣಿ (ರಾಯಚೂರು): ಜಿಲ್ಲೆಯ ಹಟ್ಟಿ ಸಮೀಪ ಗೊಲಪಲ್ಲಿ ಗ್ರಾಮದ ಗುಂಡ್ಲಬಂಡಾ ಜಲಪಾತದಲ್ಲಿ ಗುರುವಾರ ದಿಢೀರ್ ನೀರು‌ ಹೆಚ್ಚಳ ಆಗಿದ್ದರಿಂದ ಬಾಲಕ‌ ಸೇರಿ ನಾಲ್ಕು ಜನರು ಕೊಚ್ಚಿ ಹೋಗುವಾಗ ಇಬ್ಬರು ಪಾರಾಗಿದ್ದಾರೆ. ಇನ್ನಿಬ್ಬರು ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ.

ಎಲ್ಲರೂ ದೇವದುರ್ಗ ತಾಲ್ಲೂಕಿನ ಮೂಡಲಗುಂಡ‌ ಗ್ರಾಮದವರು. ಸಿದ್ದಣ್ಣ ಈಜಿ ಹೊರಬಂದಿದ್ದು, ಮಹಾಂತೇಶನನ್ನು ಪೊಲೀಸರು ರಕ್ಷಿಸಿದ್ದಾರೆ.

35 ವರ್ಷದ ಕೃಷ್ಣಪ್ಪ ಮತ್ತು 5 ವರ್ಷದ ಧನುಷ್ ನೀರಿನಲ್ಲಿ‌ ಕೊಚ್ಚಿ ಹೋಗಿದ್ದಾರೆ. ಶೋಧ ನಡೆದಿದೆ.

ಪ್ರತಿ ಮಳೆಗಾಲದಲ್ಲಿ ಮಾತ್ರ ಗುಡ್ಡಗಳಿಂದ ಹರಿದು‌ಬರುವ ನೀರಿನಿಂದ ಗುಂಡ್ಲಬಂಡಾ ಜಲಪಾತಕ್ಕೆ ಜೀವ ಬರುತ್ತದೆ. ದೂರದಲ್ಲಿ ಮಳೆಯಾಗಿದ್ದರಿಂದ ದಿಢೀರ್ ನೀರು ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT