<p><strong>ರಾಯಚೂರು:</strong> ಉತ್ತಮ ಅಂಕ ಗಳಿಕೆ ಸಾಧನೆಯೊಂದಿಗೆ 6 ಚಿನ್ನದ ಪದಕ ವಿಜೇತರಾದ ವಿದ್ಯಾರ್ಥಿನಿಗೆ ಪ್ರಾಧ್ಯಾಪಕಿಯಾಗುವ ಗುರಿ ಇದ್ದರೆ, ಐದು ಪದಕ ವಿಜೇತರಾದ ವಿದ್ಯಾರ್ಥಿಗೆ ಕೃಷಿ ವಿಜ್ಞಾನಿಯಾಗುವ ಕನಸು.</p>.<p>ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಕೇರಳದ ಗೀತಿಕಾ ಟಿ.ವಿ ಮತ್ತು ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ ವರ್ಮಾ ಕ್ರಮವಾಗಿ 6 ಮತ್ತು 5 ಪದಕಗಳು, ಪ್ರಮಾಣಪತ್ರ ಸ್ವೀಕರಿಸಿ ಸಂಭ್ರಮಿಸಿದರು.</p>.<p>ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ, ಪ್ರಮಾಣಪತ್ರ ಪ್ರದಾನ ಮಾಡಿದರು.</p>.<p>ಆಟೊ ಚಾಲಕ ಕೆ.ಸುರೇಶಕುಮಾರ್ ಅವರ ಪುತ್ರಿ ಗೀತಿಕಾ ಅವರು ಕೃಷಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾರೆ. ಹೆಚ್ಚು ಚಿನ್ನದ ಪದಕಗಳು ಬಂದಿರುವುದಕ್ಕೆ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.</p>.<p>‘ಶಿಕ್ಷಕರ ಸಲಹೆಯಂತೆ ಕೃಷಿ ಪದವಿ ಪೂರ್ಣಗೊಳಿಸಿರುವೆ. ಕೇರಳದ ಕೃಷಿ ವಿ.ವಿ.ಯಲ್ಲಿ ಸಸ್ಯ ರೋಗಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದಿದ್ದೇನೆ’ ಎಂದು ಗೀತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>45ಚಿನ್ನದ ಪದಕಗಳ ಪ್ರದಾನ: </strong>ವಿವಿಧ ವಿಭಾಗಗಳಲ್ಲಿ 32 ವಿದ್ಯಾರ್ಥಿಗಳು ಚಿನ್ನದ ಪದಕಗಳಿಗೆ ಪಾತ್ರರಾದರು. ಪದವಿಯಲ್ಲಿ 21, ಸ್ನಾತಕೋತ್ತರ ಪದವಿಯಲ್ಲಿ 14, ಡಾಕ್ಟರೇಟ್ ಪದವಿಯಲ್ಲಿ 10 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. 303 ಪದವಿ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಉತ್ತಮ ಅಂಕ ಗಳಿಕೆ ಸಾಧನೆಯೊಂದಿಗೆ 6 ಚಿನ್ನದ ಪದಕ ವಿಜೇತರಾದ ವಿದ್ಯಾರ್ಥಿನಿಗೆ ಪ್ರಾಧ್ಯಾಪಕಿಯಾಗುವ ಗುರಿ ಇದ್ದರೆ, ಐದು ಪದಕ ವಿಜೇತರಾದ ವಿದ್ಯಾರ್ಥಿಗೆ ಕೃಷಿ ವಿಜ್ಞಾನಿಯಾಗುವ ಕನಸು.</p>.<p>ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಕೇರಳದ ಗೀತಿಕಾ ಟಿ.ವಿ ಮತ್ತು ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ ವರ್ಮಾ ಕ್ರಮವಾಗಿ 6 ಮತ್ತು 5 ಪದಕಗಳು, ಪ್ರಮಾಣಪತ್ರ ಸ್ವೀಕರಿಸಿ ಸಂಭ್ರಮಿಸಿದರು.</p>.<p>ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ, ಪ್ರಮಾಣಪತ್ರ ಪ್ರದಾನ ಮಾಡಿದರು.</p>.<p>ಆಟೊ ಚಾಲಕ ಕೆ.ಸುರೇಶಕುಮಾರ್ ಅವರ ಪುತ್ರಿ ಗೀತಿಕಾ ಅವರು ಕೃಷಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾರೆ. ಹೆಚ್ಚು ಚಿನ್ನದ ಪದಕಗಳು ಬಂದಿರುವುದಕ್ಕೆ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.</p>.<p>‘ಶಿಕ್ಷಕರ ಸಲಹೆಯಂತೆ ಕೃಷಿ ಪದವಿ ಪೂರ್ಣಗೊಳಿಸಿರುವೆ. ಕೇರಳದ ಕೃಷಿ ವಿ.ವಿ.ಯಲ್ಲಿ ಸಸ್ಯ ರೋಗಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದಿದ್ದೇನೆ’ ಎಂದು ಗೀತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>45ಚಿನ್ನದ ಪದಕಗಳ ಪ್ರದಾನ: </strong>ವಿವಿಧ ವಿಭಾಗಗಳಲ್ಲಿ 32 ವಿದ್ಯಾರ್ಥಿಗಳು ಚಿನ್ನದ ಪದಕಗಳಿಗೆ ಪಾತ್ರರಾದರು. ಪದವಿಯಲ್ಲಿ 21, ಸ್ನಾತಕೋತ್ತರ ಪದವಿಯಲ್ಲಿ 14, ಡಾಕ್ಟರೇಟ್ ಪದವಿಯಲ್ಲಿ 10 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. 303 ಪದವಿ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>