ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಗೈರಾಣಿ ಭೂಮಿಯಲ್ಲಿ 8 ಎಕರೆ 17 ಗುಂಟೆ ಜಮೀನನ್ನು ವಸತಿ ಶಾಲೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಯು 2015 ರಲ್ಲಿಯೇ ಮಂಜೂರಿ ಮಾಡಿದ್ದಾರೆ. ವಸತಿ ಶಾಲೆ ನಿರ್ಮಾಣವೂ ಸೇರಿದಂತೆ ₹16.32 ಕೋಟಿ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಡಿಗಲ್ಲು ಶಿಲಾಫಲಕ ಅನಾವರಣ ಮಾಡಿದ್ದಾರೆ. ಆದರೆ, ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಎಂದು ಹೇಳಿದರು.