ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೇಶಕ್ಕಾಗಿ ಪ್ರಾಣಕೊಟ್ಟಿರುವ ಮಹನೀಯರ ಜಯಂತಿಗಳನ್ನು ಎಡಪಕ್ಷಗಳು ನಿರಂತರ ಆಚರಿಸುತ್ತಾ ಬಂದಿವೆ. ಟಿಪ್ಪು ಸುಲ್ತಾನ್ ಕೇವಲ ಮುಸಲ್ಮಾನರಿಗೆ ಸಿಮೀತವಾಗಿಲ್ಲ. ದೇಶ ರಕ್ಷಣೆಗೆ ಬ್ರಿಟಿಷರ ವಿರುದ್ಧ ರಾಜಿಯಿಲ್ಲದೆ ಹೋರಾಟ ಮಾಡಿದಲ್ಲದೆ, ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದ ಶೂರ ಟಿಪ್ಪು ಸುಲ್ತಾನ. ಟಿಪ್ಪು ಜಯಂತಿ ಆಚರಣೆಗೆ ಈ ಭಾಗದ ಜಿಲ್ಲೆಗಳಲ್ಲಿ ಇವರೆಗೂ ಯಾರೂ ಅಡ್ಡಿಪಡಿಸಿಲ್ಲ. ಸರ್ಕಾರದಿಂದ ಜಯಂತಿ ಆಚರಿಸಲು ವಿರೋಧ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.