ಅನಾದಿಕಾಲದಿಂದ ಅಸ್ಪೃಶ್ಯಕ್ಕೆ ಒಳಗಾಗಿ, ಬಿಕ್ಷೆ ಬೇಡಿ ಜೀವನ ನಡೆಸುವ ಅಲೆಮಾರಿ ಜನಾಂಗದವರು ರಾಜಕೀಯ, ಆರ್ಥಿಕ, ಸಾಮಾಜಿಕ ಹಿಂದುಳಿದಿದ್ದಾರೆ. ಜಿಲ್ಲೆಯಲ್ಲಿ ಈ ಜನಾಂಗದವರು ಬಹುಸಂಖ್ಯತರಾಗಿದ್ದರೂ ಕೂಡ ಜಿಲ್ಲಾ ಮಟ್ಟದ ಅಲೆಮಾರಿ ಅಭಿವೃದ್ಧಿ ಅನುಷ್ಠಾನದ ನಾಮ ನಿರ್ದೇಶಿತ ಸದಸ್ಯತ್ವದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ, ಮಾಲದಾಸರಿ, ಚನ್ನದಾಸರು, ಹೊಲೆಯದಾಸರ, ಸಮುದಾಯದ ಅಭ್ಯರ್ಥಿಗಳನ್ನು ಆಯ್ಕೆಯಲ್ಲಿ ಕಡೆಗಣಿಸಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿದರು.