ಇಎಫ್ಎಂಸ್ನಿಂದ ಹೊರಗುಳಿದ ಸಿಬ್ಬಂದಿ ಮಾಹಿತಿ ಅಳವಡಿಸಲು ಪಿಡಿಓ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಜಿಲ್ಲೆಯಲ್ಲಿ ಅಕ್ರಮ ನೇಮಕಾತಿಗಳನ್ನು ತಡೆಹಿಡಿದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ ವಸೂಲಾತಿಯಲ್ಲಿ ಸಿಬ್ಬಂದಿಗೆ ಶೇ 40 ರಷ್ಟು ಪ್ರತಿಶತ ವೇತನವನ್ನು ನೀಡಲು ಪಿಡಿಓ ಅವರಿಗೆ ಆದೇಶ ನೀಡುವುದು. ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರುಗಳಿಗೆ ’ಸಿ’ ದರ್ಜೆ ವೇತನ ಶ್ರೇಣಿ, ಪಂಪ್ ಆಪರೇಟರ್, ಜವಾನ, ಕಸಗುಡಿಸುವ ಅವರಿಗೆ ’ಡಿ’ ದರ್ಜೆಯ ವೇತನ ಶ್ರೇಣಿ ನಿಗಧಿಗೊಳಿಸಿ ಬಜೆಟ್ನಲ್ಲಿ ಘೋಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಂಬಳಕ್ಕಾಗಿ ₹890 ಕೋಟಿ ಹಣದ ಅವಶ್ಯಕತೆ ಇದ್ದು, ₹518 ಕೋಟಿ ಮಾತ್ರ ಹಿಂದಿನ ಸರ್ಕಾರ ಮಂಜೂರಾತಿ ಮಾಡಿದ್ದಾರೆ. ಇನ್ನೂಳಿದ ₹372 ಕೋಟಿ ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಗುಂಜಳ್ಳಿ ಗ್ರಾಮ ಪಂಚಾಯತಿಯ ಕರವಸೂಲಿಗಾರ ಪ್ರಕಾಶ್ ಅವರ ಮರಣ ಹೊಂದಿದ ಪ್ರಯುಕ್ತ ಇವರ ಧರ್ಮಪತ್ನಿ ಸಂಧ್ಯಾ ಇವರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು.