ಸಿರವಾರ: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಗೆಲುವು ಸಾಧಿಸಿದ ಕಾರಣ ಪಟ್ಟಣದಲ್ಲಿ ಯುವ ಕಾಂಗ್ರೆಸ್ನಿಂದ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ತೇಜಸ್ ಮಹಲ್ ಆವರಣದಲ್ಲಿ ಸೇರಿದ ಯುವ ಘಟಕದ ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಯೂತ್ ಕಾಂಗ್ರೆಸ್ನ ಬ್ಲಾಕ್ ಅಧ್ಯಕ್ಷ ಅಮರೇಶ ನಾಯಕ, ವೆಂಕಟೇಶ ದೊರೆ, ಅಪ್ಸರ್, ರಫಿ, ಭೀಮೇಶ, ಗುರುರಾಜ, ಹನುಮೇಶ, ವಂದಲಯ್ಯ ಹಾಗೂ ವೆಂಕಟೇಶ ಇದ್ದರು.