<p><strong>ಸಿರವಾರ: </strong>ತಾಲ್ಲೂಕಿನ ಬಲ್ಲಟಗಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಮುಖರಾದ ಹಕ್ಕ ಬುಕ್ಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯದ 686ನೇ ವರ್ಷ ಸಂಸ್ಥಾಪನಾ ದಿನವನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.</p>.<p>ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಯುವ ಘಟಕ ಉಪಾಧ್ಯಕ್ಷ ಭೀಮಾಶಂಕರ ಮಾತನಾಡಿ, ‘ಹಕ್ಕ ಬುಕ್ಕರು ನಾಯಕ ಸಮಾಜದ ಕುಡಿಗಳಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ಇವರ ಮಹತ್ಕಾರ್ಯಗಳು ನಮಗೆ ಪ್ರೇರಣೆದಾಯಕವಾಗಿದೆ‘ ಎಂದು ಹೇಳಿದರು.</p>.<p>ಬಲ್ಲಟಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಶಿವಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ಕುಂದಾಳ್, ಗೋವಿಂದಪ್ಪ, ಮುಖಂಡರಾದ ಎನ್.ಮಹಾದೇವಪ್ಪ, ಡಿ.ಅರುಣ್ ಕುಮಾರ್, ನಾಗರಾಜ ಮಲ್ಲಟ, ಡಿ.ಪ್ರಕಾಶ್, ಟಿ.ಮಾರೆಪ್ಪ, ಹನುಮಂತ್ರಾಯ ಕಾವಲಿ, ಸುನೀಲ್, ಮಾರೆಪ್ಪ, ನಿಂಗಪ್ಪ , ರಾಜೇಶ್, ನಾಗರಾಜ ಚಿಪ್ಪಾಡಿ, ಮುಕ್ಕಣ, ಚನ್ನಬಸವ ಮ್ಯಾಡಿ, ಕೃಷ್ಣ, ಆಂಜನೇಯ ಕಲ್ಮಲ್ ಇದ್ದರು.</p>.<p><strong>ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ<br />ಸಿರವಾರ: </strong>‘ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯದ ಕೇಂದ್ರವಾಗಿದ್ದು, ಇದರ ವೈಭವವು ಭಾರತದ ಕಿರೀಟವಿದ್ದಂತೆ‘ ಎಂದು ರಂಗನಾಥ ನಾಯಕ ಹೇಳಿದರು.</p>.<p>ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ 686ನೇ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.</p>.<p>ಸಮುದಾಯದ ಮುಖಂಡರಾದ ಕಲ್ಲೂರು ಲಕ್ಷ್ಮಣ, ಅಪ್ಪಾಜಿ ನಾಯಕ, ಸಿಕಂಟಿ ಮಲ್ಲಿಕಾರ್ಜುನ ನಾಯಕ, ಯಲ್ಲಪ್ಪ ದೊರೆ ಚಿನ್ನಾನ್, ಅಂಬರೇಶ ನಾಯಕ, ಬಸು ನಾಯಕ, ವಿರೇಶ್ ನಾಯಕ, ಗುಜ್ಜಲ್ ಗೋಪಾಲ ನಾಯಕ, ಕೆ.ಗೋಪಾಲ್ ನಾಯಕ ಸೇರಿದಂತೆ ನಾಯಕ ಸಮಾಜದ ಯುವಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ: </strong>ತಾಲ್ಲೂಕಿನ ಬಲ್ಲಟಗಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಮುಖರಾದ ಹಕ್ಕ ಬುಕ್ಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯದ 686ನೇ ವರ್ಷ ಸಂಸ್ಥಾಪನಾ ದಿನವನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.</p>.<p>ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಯುವ ಘಟಕ ಉಪಾಧ್ಯಕ್ಷ ಭೀಮಾಶಂಕರ ಮಾತನಾಡಿ, ‘ಹಕ್ಕ ಬುಕ್ಕರು ನಾಯಕ ಸಮಾಜದ ಕುಡಿಗಳಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ಇವರ ಮಹತ್ಕಾರ್ಯಗಳು ನಮಗೆ ಪ್ರೇರಣೆದಾಯಕವಾಗಿದೆ‘ ಎಂದು ಹೇಳಿದರು.</p>.<p>ಬಲ್ಲಟಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಶಿವಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ಕುಂದಾಳ್, ಗೋವಿಂದಪ್ಪ, ಮುಖಂಡರಾದ ಎನ್.ಮಹಾದೇವಪ್ಪ, ಡಿ.ಅರುಣ್ ಕುಮಾರ್, ನಾಗರಾಜ ಮಲ್ಲಟ, ಡಿ.ಪ್ರಕಾಶ್, ಟಿ.ಮಾರೆಪ್ಪ, ಹನುಮಂತ್ರಾಯ ಕಾವಲಿ, ಸುನೀಲ್, ಮಾರೆಪ್ಪ, ನಿಂಗಪ್ಪ , ರಾಜೇಶ್, ನಾಗರಾಜ ಚಿಪ್ಪಾಡಿ, ಮುಕ್ಕಣ, ಚನ್ನಬಸವ ಮ್ಯಾಡಿ, ಕೃಷ್ಣ, ಆಂಜನೇಯ ಕಲ್ಮಲ್ ಇದ್ದರು.</p>.<p><strong>ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ<br />ಸಿರವಾರ: </strong>‘ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯದ ಕೇಂದ್ರವಾಗಿದ್ದು, ಇದರ ವೈಭವವು ಭಾರತದ ಕಿರೀಟವಿದ್ದಂತೆ‘ ಎಂದು ರಂಗನಾಥ ನಾಯಕ ಹೇಳಿದರು.</p>.<p>ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ 686ನೇ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ವಾಲ್ಮೀಕಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.</p>.<p>ಸಮುದಾಯದ ಮುಖಂಡರಾದ ಕಲ್ಲೂರು ಲಕ್ಷ್ಮಣ, ಅಪ್ಪಾಜಿ ನಾಯಕ, ಸಿಕಂಟಿ ಮಲ್ಲಿಕಾರ್ಜುನ ನಾಯಕ, ಯಲ್ಲಪ್ಪ ದೊರೆ ಚಿನ್ನಾನ್, ಅಂಬರೇಶ ನಾಯಕ, ಬಸು ನಾಯಕ, ವಿರೇಶ್ ನಾಯಕ, ಗುಜ್ಜಲ್ ಗೋಪಾಲ ನಾಯಕ, ಕೆ.ಗೋಪಾಲ್ ನಾಯಕ ಸೇರಿದಂತೆ ನಾಯಕ ಸಮಾಜದ ಯುವಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>