ಈ ಕಾಲುವೆ ಮೂಲಕ ಕೊನೆ ಭಾಗದ ಮಂಡಲಗುಡ್ಡ, ಗಾಜಲದಿನ್ನಿ, ಮುಕ್ಕನಾಳ ಹಾಗೂ ಪರಪುರ ಸೇರಿದಂತೆ ಇತರೆ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಅದರೆ, ನಿರ್ಮಾಣ ಹಂತದಲ್ಲಿಯೇ ಕಾಲುವೆಯ ಗೋಡೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸಿಗುವುದೂ ಅನುಮಾನವಾಗಿದೆ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ನರಸಣ್ಣ ನಾಯಕ ಅತಂಕ ವ್ಯಕ್ತಪಡಿಸಿದರು.