ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಹಿರಿಯ ವ್ಯವಸ್ಥಾಪಕ(ಮಾಸ) ಯಮನೂರಪ್ಪ, ಹೌಸಿಂಗ್ ಅಧಿಕಾರಿ ರಮೇಶ, ಖಾಲಿ ಕೊಡಗಳನ್ನು ತೆಗೆದುಕೊಂಡು ಮುಖ್ಯದ್ವಾರಕ್ಕೆ ಬಂದಿದ್ದ ಮಹಿಳೆರ ಜತೆ ಮಾತನಾಡಿ, ಕೃಷ್ಣಾ ನದಿಯಲ್ಲಿ ನೀರಿನ ಇಳಿಕೆಯಾಗಿದ್ದರಿಂದ ಸಮಸ್ಯೆಯಾಗಿದೆ. ನಿಮ್ಮ ಕಾಲೊನಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದೆಂಬ ಭರವಸೆ ನೀಡಿದ ನಂತರ ಮಹಿಳೆರು ತೆರಳಿದರು.