ಹಿಂದೂ ಮುಸ್ಲಿಮರು ದೇಶದಲ್ಲೀ ಸಹೋದರರಂತೆ ಬಾಳುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕೋಮು ಸಂಘರ್ಷ ಸೃಷ್ಟಿಸಿ ಕಲಹ ಸೃಷ್ಟಿಸುತ್ತಿದೆ. ಜನರ ದಾಖಲೆ ಕೇಳುತ್ತಿದ್ದೀರಿ. ಆದರೆ, ನಾವು ಭಾರತೀಯರೇ. ಈ ದೇಶ ಹಿಂದುಸ್ತಾನ. ನಮ್ಮ ಮತ ಪಡೆದು ಪ್ರಧಾನಿಮಂತ್ರಿಗಳಾದಾಗ ಜನರ ದಾಖಲೆಗಳ ಬಗ್ಗೆ ಸಂದೇಹ ಬರಲಿಲ್ಲವೆ ಎಂದು ಪ್ರಶ್ನಿಸಿದರು.