ಶಕ್ತಿನಗರ: ರಾಯಚೂರು ತಾಲ್ಲೂಕಿನ ಯರಮರಸ್ ದಂಡು ಗ್ರಾಮದಲ್ಲಿ ಮದುವೆ ನಿಶ್ಚಯವಾದ ಕಾರಣ ಜಿಗುಪ್ಸೆಗೊಂಡು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುನೀತಾ (26) ಆತ್ಮಹತ್ಯೆ ಮಾಡಿಕೊಂಡವರು.
ಈಚೆಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಯುವತಿ ಈಗಲೇ ನನಗೆ ಮದುವೆ ಬೇಡ. ನಾನು ಇನ್ನೂ ಓದಬೇಕು ಎನ್ನುತ್ತಿದ್ದರು. ಮದುವೆಯಾದ ನಂತರವೂ ಓದಬಹುದು ಎಂದು ಹೇಳಿ ಹಿರಿಯರು ಯುವತಿಯನ್ನು ಮದುವೆಗೆ ಒಪ್ಪಿಸಿದರು.
ಸುನೀತಾ ಏ.26ರಂದು ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ವಾಪಸ್ ಬಂದು ಮನೆಯಲ್ಲಿ ಚಾಕುವಿನಿಂದ ಎದೆಭಾಗಕ್ಕೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಸುನೀತಾರ ಅಣ್ಣ ರವಿಕುಮಾರ ಅವರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.