<p>ರಾಯಚೂರು: ಜಿಲ್ಲೆಯಲ್ಲಿ ಮೇ 5 ರಂದು ಮಧ್ಯಾಹ್ನ 12:28 ಶೂನ್ಯ ನೆರಳು ವಿದ್ಯಮಾನ ನಡೆಯಿತು. ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆಯ ಮೂಲಕ ಇದನ್ನು ಸೆರೆ ಹಿಡಿಯಲಾಯಿತು.</p>.<p>ಈ ವಿದ್ಯಮಾನ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಹಾದು ಹೋಗುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.</p>.<p>ಸೂರ್ಯನು ನಮ್ಮ ಪ್ರದೇಶಕ್ಕೆ ಲಂಬವಾಗಿ ಚಲಿಸಿದಾಗ ಪ್ರತಿ ವಸ್ತುವಿನ ನೆರಳು ಅಕ್ಕಪಕ್ಕ ಕಾಣಿಸಿಕೊಳ್ಳದೇ ಅದರ ಪಾದದಡಿಯಲ್ಲಿ ಮೂಡುವುದರಿಂದ ಕ್ಷಣಕಾಲ ನೆರಳು ನಮಗೆ ಗೋಚರವಾಗುವುದಿಲ್ಲ. ಈ ಅಪರೂಪದ ವಿದ್ಯಮಾನವು ರಾಯಚೂರು ಜಿಲ್ಲೆಯಲ್ಲಿ ಪುನಃ ಕಾಣಸಿಗುವುದು ಅಗಸ್ಟ್ ಎರಡನೇ ವಾರದಲ್ಲಿ.</p>.<p>ಮಧ್ಯಾಹ್ನದ ಸಮಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕಂಡಂತೆ ಭಾಸವಾದರೂ ವಾಸ್ತವದಲ್ಲಿ ಆತ ನೇರವಾಗಿ ನಮ್ಮ ನೆತ್ತಿಯ ಮೇಲಿರದ ಕಾರಣ ಪ್ರತಿದಿನವೂ ಶೂನ್ಯ ನೆರಳಿನ ದಿನವಾಗಲು ಸಾಧ್ಯವಿಲ್ಲ. ಈ ವಿದ್ಯಮಾನವನ್ನು ನಿಗದಿತ ದಿನದಂದು ಮಧ್ಯಾಹ್ನ 12 ರಿಂದ 12.30 ರ ಒಳಗೆ ಯಾವುದೇ ವಸ್ತುಗಳನ್ನು ನೆಲಕ್ಕೆ ಲಂಬವಾಗಿ ಇರಿಸಿದಾಗ, ಆ ವಸ್ತುಗಳ ನೆರಳಿನ ಉದ್ದ ಕಡಿಮೆಯಾಗುತ್ತ ನಿಗದಿತ ಸಮಯಕ್ಕೆ ಶೂನ್ಯ ನೆರಳು ಸಂಭವಿಸುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.</p>.<p>ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಸರ್ಕಾರವು ಲಾಕ್ಡೌನ್ ಘೋಷಿಸಿರುವ ಕಾರಣ ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಿರುವ ಕಾರಣ ವಿಜ್ಞಾನ ಕೇಂದ್ರದ ಸಿಬ್ಬಂದಿ ಮಾತ್ರ ವಿದ್ಯಮಾನವನ್ನು ಸೆರೆಹಿಡಿಯುವಲ್ಲಿ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ಜಿಲ್ಲೆಯಲ್ಲಿ ಮೇ 5 ರಂದು ಮಧ್ಯಾಹ್ನ 12:28 ಶೂನ್ಯ ನೆರಳು ವಿದ್ಯಮಾನ ನಡೆಯಿತು. ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆಯ ಮೂಲಕ ಇದನ್ನು ಸೆರೆ ಹಿಡಿಯಲಾಯಿತು.</p>.<p>ಈ ವಿದ್ಯಮಾನ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಹಾದು ಹೋಗುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.</p>.<p>ಸೂರ್ಯನು ನಮ್ಮ ಪ್ರದೇಶಕ್ಕೆ ಲಂಬವಾಗಿ ಚಲಿಸಿದಾಗ ಪ್ರತಿ ವಸ್ತುವಿನ ನೆರಳು ಅಕ್ಕಪಕ್ಕ ಕಾಣಿಸಿಕೊಳ್ಳದೇ ಅದರ ಪಾದದಡಿಯಲ್ಲಿ ಮೂಡುವುದರಿಂದ ಕ್ಷಣಕಾಲ ನೆರಳು ನಮಗೆ ಗೋಚರವಾಗುವುದಿಲ್ಲ. ಈ ಅಪರೂಪದ ವಿದ್ಯಮಾನವು ರಾಯಚೂರು ಜಿಲ್ಲೆಯಲ್ಲಿ ಪುನಃ ಕಾಣಸಿಗುವುದು ಅಗಸ್ಟ್ ಎರಡನೇ ವಾರದಲ್ಲಿ.</p>.<p>ಮಧ್ಯಾಹ್ನದ ಸಮಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕಂಡಂತೆ ಭಾಸವಾದರೂ ವಾಸ್ತವದಲ್ಲಿ ಆತ ನೇರವಾಗಿ ನಮ್ಮ ನೆತ್ತಿಯ ಮೇಲಿರದ ಕಾರಣ ಪ್ರತಿದಿನವೂ ಶೂನ್ಯ ನೆರಳಿನ ದಿನವಾಗಲು ಸಾಧ್ಯವಿಲ್ಲ. ಈ ವಿದ್ಯಮಾನವನ್ನು ನಿಗದಿತ ದಿನದಂದು ಮಧ್ಯಾಹ್ನ 12 ರಿಂದ 12.30 ರ ಒಳಗೆ ಯಾವುದೇ ವಸ್ತುಗಳನ್ನು ನೆಲಕ್ಕೆ ಲಂಬವಾಗಿ ಇರಿಸಿದಾಗ, ಆ ವಸ್ತುಗಳ ನೆರಳಿನ ಉದ್ದ ಕಡಿಮೆಯಾಗುತ್ತ ನಿಗದಿತ ಸಮಯಕ್ಕೆ ಶೂನ್ಯ ನೆರಳು ಸಂಭವಿಸುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.</p>.<p>ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಸರ್ಕಾರವು ಲಾಕ್ಡೌನ್ ಘೋಷಿಸಿರುವ ಕಾರಣ ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಿರುವ ಕಾರಣ ವಿಜ್ಞಾನ ಕೇಂದ್ರದ ಸಿಬ್ಬಂದಿ ಮಾತ್ರ ವಿದ್ಯಮಾನವನ್ನು ಸೆರೆಹಿಡಿಯುವಲ್ಲಿ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>