ರಾಯಚೂರು: ಇಲ್ಲಿನ ಬ್ರೇಸ್ತವಾರಪೇಟೆಯ ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯು 41ನೇ ದಸರಾ ನವರಾತ್ರಿ ಉತ್ಸವ ಅಂಗವಾಗಿ ಇದೇ 16ರಿಂದ 24ರವರೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ, ಪದ್ಮಾವತಿ-ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
16ರಂದು ಸೂರ್ಯವಾಹನ, 17ರಂದು ಆದಿಶೇಷವಾಹನ, 18ರಂದು ಸಿಂಹವಾಹನ, 19ರಂದು ಗರುಡವಾಹನ, 20ರಂದು ಪವಮಾನ ಹೋಮ ಹಾಗೂ ಅಂಜನೇಯ ವಾಹನ ಉತ್ಸವ ನಡೆಯಲಿದೆ. 21ರಂದು ಕಾಮಧೇನು ಕಲ್ಪವೃಕ್ಷವಾಹನ ಹಾಗೂ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ ನಡೆಯಲಿದೆ. 22ರಂದು ಚಂದ್ರವಾಹನ ಹಾಗೂ ಉಚ್ಚಾಯ ಸೇವೆ ನೆರವೇರಲಿದೆ.