<p><strong>ರಾಯಚೂರು: </strong>ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ ವಿರೋಧಿಸಿ ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.<br /> <br /> ನಂತರ ತಹಸೀಲದಾರ ಕಚೇರಿಯ ಎದುರು ಧರಣಿ ನಡೆಸಿದರು. ಬಳಿಕ ಸರ್ಕಾರಕ್ಕೆ ತಹಸೀಲದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸ್ವಾತಂತ್ರ್ಯ ಗಳಿಸಿ 64 ವರ್ಷಗಳು ಕಳೆದರೂ ಅಮಾನವೀಯ. ಅಪಮಾನ. ಜಾತಿ ತಾರತಮ್ಯ, ಮಡೆಸ್ನಾನ, ಪಂಕ್ತಿ ಬೇಧ, ಅಸ್ಪೃಶ್ಯತೆ ನಿರಂತರವಾಗಿ ಮುಂದುವರಿದಿದೆ. <br /> <br /> ದಲಿತರ ಮೇಲೆ ದೌರ್ಜನ್ಯ, ದಾಳಿ, ಬಹಿಷ್ಕಾರ ನಿರಂತರ ಮುಂದುವರಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ರಕ್ಷಣೆ, ಅಭಿವೃದ್ಧಿಗಾಗಿ ಕೋಟಿ ಹಣ ಖರ್ಚು ಮಾಡಿದ್ದರೂ ವಾಸ್ತವ ಸ್ಥಿತಿ ಗಮನಿಸಿದಾಗ ಸರ್ಕಾರದ ಹಣ ಪೋಲಾಗಿದೆ. ದಲಿತರು ಅಭಿವೃದ್ಧಿಗೊಂಡಿಲ್ಲ ಎಂದು ಹೇಳಿದರು.<br /> <br /> ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ, ಪದ್ಧತಿಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಒತ್ತಾಯಿಸಿ ಹಾಗೂ ದಲಿತರ ಏಳ್ಗೆಗಾಗಿ ಕೇಂದ್ರ ಶಾಸನ ಜಾರಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷವು ಈ ಹೋರಾಟ ಆಯೋಜಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಸಂಘಟನೆ ತಿಳಿಸಿದೆ.<br /> <br /> ಸಂಘಟನೆ ಮುಖಂಡರಾದ ಡಿ.ಎಸ್ ಶರಣಬಸವ, ಕೆ.ಜಿ ವಿರೇಶ, ಎಚ್ ಪದ್ಮಾ, ವೀರಭದ್ರ, ವರಲಕ್ಷ್ಮೀ, ಅಂಜನಮ್ಮ, ರಂಗಪ್ಪ, ವೈ ಈರಣ್ಣ, ಪ್ರಭುಲಿಂಗ, ಸುಮಿತ್ರಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ ವಿರೋಧಿಸಿ ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.<br /> <br /> ನಂತರ ತಹಸೀಲದಾರ ಕಚೇರಿಯ ಎದುರು ಧರಣಿ ನಡೆಸಿದರು. ಬಳಿಕ ಸರ್ಕಾರಕ್ಕೆ ತಹಸೀಲದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸ್ವಾತಂತ್ರ್ಯ ಗಳಿಸಿ 64 ವರ್ಷಗಳು ಕಳೆದರೂ ಅಮಾನವೀಯ. ಅಪಮಾನ. ಜಾತಿ ತಾರತಮ್ಯ, ಮಡೆಸ್ನಾನ, ಪಂಕ್ತಿ ಬೇಧ, ಅಸ್ಪೃಶ್ಯತೆ ನಿರಂತರವಾಗಿ ಮುಂದುವರಿದಿದೆ. <br /> <br /> ದಲಿತರ ಮೇಲೆ ದೌರ್ಜನ್ಯ, ದಾಳಿ, ಬಹಿಷ್ಕಾರ ನಿರಂತರ ಮುಂದುವರಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ರಕ್ಷಣೆ, ಅಭಿವೃದ್ಧಿಗಾಗಿ ಕೋಟಿ ಹಣ ಖರ್ಚು ಮಾಡಿದ್ದರೂ ವಾಸ್ತವ ಸ್ಥಿತಿ ಗಮನಿಸಿದಾಗ ಸರ್ಕಾರದ ಹಣ ಪೋಲಾಗಿದೆ. ದಲಿತರು ಅಭಿವೃದ್ಧಿಗೊಂಡಿಲ್ಲ ಎಂದು ಹೇಳಿದರು.<br /> <br /> ಮಡೆಸ್ನಾನ, ಪಂಕ್ತಿ ಬೇಧ, ಜಾತಿ ತಾರತಮ್ಯ, ಪದ್ಧತಿಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಒತ್ತಾಯಿಸಿ ಹಾಗೂ ದಲಿತರ ಏಳ್ಗೆಗಾಗಿ ಕೇಂದ್ರ ಶಾಸನ ಜಾರಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷವು ಈ ಹೋರಾಟ ಆಯೋಜಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಸಂಘಟನೆ ತಿಳಿಸಿದೆ.<br /> <br /> ಸಂಘಟನೆ ಮುಖಂಡರಾದ ಡಿ.ಎಸ್ ಶರಣಬಸವ, ಕೆ.ಜಿ ವಿರೇಶ, ಎಚ್ ಪದ್ಮಾ, ವೀರಭದ್ರ, ವರಲಕ್ಷ್ಮೀ, ಅಂಜನಮ್ಮ, ರಂಗಪ್ಪ, ವೈ ಈರಣ್ಣ, ಪ್ರಭುಲಿಂಗ, ಸುಮಿತ್ರಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>