ಇಲ್ಲಿಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸಫ್ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿ ದಾಖಲೆಗಳ ಪ್ರಕಾರ 5.64 ಲಕ್ಷ ರೂಪಾಯಿ ಕೂಲಿ ನೀಡುವುದಾಗಿ ಹೇಳಿದರು. ಈಗಾಗಲೇ ಈ ವಿಷಯ ಕುರಿತು ತಾಲ್ಲೂಕು ಪಂಚಾಯಿತು ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಕಿರಿಯ ಎಂಜಿನಿಯರ್ ಅಚುತ್ ರಾವ್ ಅವರು 8 ಲಕ್ಷ ರೂಪಾಯಿಗಳ ಕೆಲಸ ನಡೆದಿದೆ ಎಂದು ಎಂ.ಬಿ. ದಾಖಲೆಯಲ್ಲಿ ಬರೆದಿದ್ದಾರೆ. ಈಗ 5.6 ಲಕ್ಷ ರೂಪಾಯಿತಿ ಕೆಲಸ ಆಗಿದೆ ಎಂದರೆ ಒಪ್ಪುವುದಿಲ್ಲ ಎಂದು ಮುಖಂಡರಾದ ಮಲ್ಲಯ್ಯ ಜಾಲಹಳ್ಳಿ, ಕೆ. ಶಿವಾನಂದ, ಎಸ್. ಸರಸ್ವತಿ, ರಂಗನಾಥ ಪಟ್ಟು ಹಿಡಿದರು.