ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ₹ 2 ಸಾವಿರನೆರವುನೀಡುವ ಭರವಸೆ ನೀಡಿದೆ. ಕೆಲವರ ಖಾತೆಗೆ ಮೊದಲ ಹಂತ ₹1 ಸಾವಿರ ಜಮೆಯಾಗಿದೆ. ಉಳಿದವರಿಗೇ ಆ ಹಣವೂ ಬಂದಿಲ್ಲ. ಮೊದಲ ಕಂತು ₹1ಸಾವಿರ ಜಮೆ ಮಾಡುವ ಜತೆಗೆ, ಎರಡನೇ ಕಂತನ್ನೂ ತಕ್ಷಣ ಬಿಡುಗಡೆ ಮಾಡಬೇಕು.ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸೆಸ್ ಮೂಲಕ ಸುಮಾರು ₹10 ಸಾವಿರ ಕೋಟಿ ಸಂಗ್ರಹಿಸಿದೆ.ಸರ್ಕಾರದ ಆ ಹಣ ನೆರವಿಗಾಗಿ ಬಳಸಿಕೊಳ್ಳಬೇಕು.ರಾಜ್ಯ ಕಾರ್ಮಿಕ ಇಲಾಖೆ ಆನ್ಲೈನ್ ವ್ಯವಸ್ಥೆ ಕಲ್ಪಿಸುತ್ತಿರುವ ಕಾರಣತಡವಾಗುತ್ತಿದೆ. ಅದರ ಬದಲು ಜಿಲ್ಲಾಮಟ್ಟದಲ್ಲೇಕಾರ್ಮಿಕ ಇಲಾಖೆ ಹಣ ಸಂದಾಯ ಮಾಡಲುಅವಕಾಶನೀಡಬೇಕು.ಈಗಾಗಲೇ ಮದುವೆ, ಶಿಕ್ಷಣ, ಚಿಕಿತ್ಸೆ ಹೀಗೆಹಲವುರೀತಿಯಿಂದ ಕಾರ್ಮಿಕರಿಗೆ ಬರಬೇಕಾದ ನೆರವಿನ ಹಣ 3 ತಿಂಗಳಾದರೂ ಬಂದಿಲ್ಲ. ಈ ಹಣವೇ ಸುಮಾರು ₹2 ಕೋಟಿಇದೆ.ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.