ಮಾಗಡಿ: ಪಟ್ಟಣದ ಎನ್ಇಎಸ್ ಸರ್ಕಲ್ ಬಳಿ ಮಾರುತಿ ವ್ಯಾನ್ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ವ್ಯಾನ್ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಪ್ಪ(50), ಶಶಿಕಲಾ(45), ಪ್ರಮೀಳಾ(40)ಗಾಯಾಳುಗಳು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ತಿರುಮಲೆ ರಂಗನಾಥಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದರು. ಘಟನೆಯಿಂದ ವ್ಯಾನ್ ಸರ್ಕಲ್ನಲ್ಲಿ ಇರುವ ಗಾಂಧೀಜಿ ಪುತ್ಥಳಿಯ ಪೀಠಕ್ಕೆ ಹಾನಿಯಾಗಿದೆ.